Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಆರ್. ರಾಮಕೃಷ್ಣ

ಅಧ್ಯಯನ, ಅಧ್ಯಾಪನ ಮತ್ತು ಬರವಣಿಗೆಯನ್ನೇ ಬದುಕಿನ ಡಾ. ಆರ್. ರಾಮಕೃಷ್ಣ. ನೂರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಗುರು. ಡಾ. ಆರ್. ರಾಮಕೃಷ್ಣ ಉಸಿರಾಗಿಸಿಕೊಂಡ ಶಿಕ್ಷಣ ತಜ್ಞರು
ಸಾಂಸ್ಕೃತಿಕ ನಗರಿ ಮೈಸೂರು ರಾಮಕೃಷ್ಣರ ಹುಟ್ಟೂರು, ಮಾತ್ರವಲ್ಲ ಸಾಧನೆಯ ಕರ್ಮಭೂಮಿಯೂ ಸಹ. ಕನ್ನಡ, ಭಾಷಾ-ವಿಜ್ಞಾನಗಳೆರಡರಲ್ಲೂ ಸ್ನಾತಕೋತ್ತರ ಪದವಿ, ಭಾಷಾ ವಿಜ್ಞಾನದಲ್ಲಿ ಪಿಎಚ್.ಡಿ, ಭಾರತೀಯ ಸಾಹಿತ್ಯದಲ್ಲಿ ಡಿಪ್ಲೋಮಾ ವ್ಯಾಸಂಗ, ಬ್ಯಾಂಕ್ ವಿಜೇತ ವಿದ್ಯಾರ್ಥಿ, ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ, ಮುಖ್ಯಸ್ಥರಾಗಿ ವೃತ್ತಿಬದುಕು ಸಂಪನ್ನ, ಅಧ್ಯಯನ, ಬರೆವಣಿಗೆ ಸಾಧನೆಯ ಕಾರ್ಯಕ್ಷೇತ್ರ ಸಾಮಾನ್ಯ ಮತ್ತು ದ್ರಾವಿಡ ಭಾಷಾ ವಿಜ್ಞಾನ, ಭಾರತೀಯ ಸಾಹಿತ್ಯ ವಿಮರ್ಶೆ, ವ್ಯಾಕರಣ ಶಾಸ್ತ್ರ, ಮಧ್ಯಕಾಲೀನ ಮತ್ತು ಹೊಸಗನ್ನಡ ಸಾಹಿತ್ಯದಲ್ಲಿ ವಿಶೇಷ ಪರಿಣಿತಿ. ೧೫ ಕೃತಿಗಳ ಲೇಖಕರು, ೧೦ ಮೌಲಿಕ ಸಂಶೋಧನಾ ಪ್ರಕಟಣೆಗಳ ಕರ್ತೃ. ಪ್ರಕಟಿತ ಲೇಖನಗಳು ಐವತ್ತಕ್ಕೂ ಹೆಚ್ಚು. ವಿಚಾರಸಂಕಿರಣ-ಕಾರ್ಯಾಗಾರಗಳಲ್ಲಿ ಪ್ರಜ್ವಲಿಸಿದ ಪಾಂಡಿತ್ಯ. ೨೮ ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶನ ಮಾಡಿದ ಗುರುವರ್ಯರು.