Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ವಿದುಷಿ ಲಲಿತಾ ಜೆ ರಾವ್

ಆಡ್ರಾ ಘರಾಣೆಯ ಪ್ರಮುಖ ಗಾಯಕಿ ಎಂದು ಹೆಸರಾಗಿರುವ ಲಲಿತ್ ಜೆ ರಾವ್ ಅವರು ಸಂಗೀತ ಕಲಿಕೆ ನಡೆಸಿದ್ದು ಪದ್ಮಭೂಷಣ ಪುರಸ್ಕತ ಪಂಡಿತ್ ಖಾದೀಮ್ ಹುಸೇನ್ ಖಾನ್, ದಿನಕರ ಕಾಯ್ಕಿಣಿ ಹಾಗೂ ಪಂ.ರಾಮರಾವ್ ನಾಯಕ್ ಅವರುಗಳ ಬಳಿ.

ಆರು ದಶಕಗಳಿಂದ ದೇಶದ ಪ್ರಮುಖ ಸಂಗೀತ ಉತ್ಸವಗಳಲ್ಲಿ ಪಾಲುಗೊಳ್ಳುತ್ತಿರುವ ಲಲಿತ್ .ಜೆ.ರಾವ್ ಅವರು ಗ್ವಾಲಿಯರ್‌ನ ತಾನಸೇನ್ ಸಮಾರೋಹ್, ದೆಹಲಿಯ ವಿಷ್ಣು ದಿಗಂಬರ ಜಯಂತಿ ಉತ್ಸವ, ಮಥುರಾದ ಗುಣಿದಾಸ ಸಂಗೀತ ಸಮ್ಮೇಳನ, ಪುಣೆಯ ಸವಾಯಿ ಗಂಧರ್ವ ಸಂಗೀತ ಸಮ್ಮೇಳನ ಸೇರಿದಂತೆ ದೇಶ ವಿದೇಶಗಳಲ್ಲಿ ೧೫೦೦ಕ್ಕೂ ಹೆಚ್ಚು ಕಚೇರಿಗಳನ್ನು ನೀಡಿದ ಹಿರಿಮೆ ಇವರದು.

ಇಂಜಿನಿಯರಿಂಗ್ ಪದವೀಧರರಾದ ಇವರು ಹಿಂದೂಸ್ಥಾನಿ ಸಂಗೀತಕ್ಕಾಗಿ ಪೂರ್ಣ ಸಮಯವನ್ನು ಮೀಸಲಿಟ್ಟಿದ್ದು ಆಕಾಶವಾಣಿ ಹಾಗೂ ದೂರದರ್ಶನದ ಎ ಶ್ರೇಣಿ ಕಲಾವಿದರಾಗಿದ್ದಾರೆ.

ಕೇರಳ ಸರ್ಕಾರದ ನಿಶಾಗಂಧಿ ಪ್ರಶಸ್ತಿ, ಗುಜರಾತ್ ಸರ್ಕಾರದ ತಾನಾ ರೀರೀ ಪ್ರಶಸ್ತಿ ಸೇರಿದಂತೆ ಹಲವು ಪ್ರಮುಖ ಗೌರವಗಳಿಗೆ ಪಾತ್ರರಾಗಿರುವ ಇವರು ಭಾರತೀಯ ಸಾಂಪ್ರದಾಯಿಕ ಹಿಂದೂಸ್ಥಾನಿ ಸಂಗೀತ ಭಂಡಾರದ ಕಾರ್ಯಕ್ರಮದ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.