Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ವೀರೇಶ ಕಿತ್ತೂರು

ಗದಗ ಜಿಲ್ಲೆಯ ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿಯಾಗಿ ಸಂಗೀತಾಭ್ಯಾಸ ಮಾಡಿದ ವೀರೇಶ ಕಿತ್ತೂರು ಕರ್ನಾಟಕ ಸರ್ಕಾರದ ವಿದ್ವತ್ ಹಾಗೂ ಗಾಯನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ.

ಆಕಾಶವಾಣಿಯ ಕಲಾವಿದರಾಗಿರುವ ವೀರೇಶ ಅವರು ಶೀಶೈಲ, ಸೊಲ್ಲಾಪುರ ಸೇರಿದಂತೆ ನೂರಾರು ಸಂಗೀತ ಸಮ್ಮೇಳನಗಳಲ್ಲಿ ಕಚೇರಿಗಳನ್ನು ನೀಡಿದ್ದು, ಇವರ ನೂರಕ್ಕೂ ಹೆಚ್ಚು ಧ್ವನಿಸುರುಳಿಗಳು ಜನಪ್ರಿಯವಾಗಿವೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ, ರಂಭಾಪುರಿ ಧಾರ್ಮಿಕ ಸಮ್ಮೇಳನದ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಲಭಿಸಿವೆ.