Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶಿಲ್ಪಿ ಎನ್.ಎಸ್. ಜನಾರ್ಧನ ಮೂರ್ತಿ

ಸುಪ್ರಸಿದ್ಧ ಜಂಬೂಸವಾರಿ ಮೆರವಣಿಗೆಯ ಚಾಮುಂಡೇಶ್ವರಿ ವಿಗ್ರಹವನ್ನು ರೂಪಿಸಿದ ಖ್ಯಾತಿಯ ಅಪರೂಪದ ಶಿಲ್ಪಿ ಎನ್.ಎಸ್. ಜನಾರ್ಧನ ಮೂರ್ತಿ. ಲೋಹದ ಶಿಲ್ಪ ತಯಾರಿಕೆಯ ಮೇರು ಕಲಾವಿದ, ಕಲಾಶಿಕ್ಷಕ.

ಸಾಂಸ್ಕೃತಿಕ ನಗರಿ ಮೈಸೂರಿನ ಎನ್.ಎಸ್. ಜನಾರ್ಧನ ಮೂರ್ತಿ ಅವರಿಗೆ ಕಲೆಯೇ ಬದುಕು-ಜೀವಾಳ- ಕುಲಕಸುಬು, ತಂದೆ ಎನ್.ಪಿ. ಶ್ರೀನಿವಾಸಾಚಾರ್ ಜಿ. ಭಾಷ್ಯಂ ಸ್ಥಪತಿ ಅವರಿಂದ ಎಳವೆಯಲ್ಲೇ ಶಿಲ್ಪಕಲಾಭ್ಯಾಸ. ಓದಿದ್ದು ಎಸ್.ಎಸ್.ಎಲ್.ಸಿ. ಮಾತ್ರ ಅಖಿಲ ಭಾರತ ಕರಕುಶಲ ಮಂಡಳಿ ತರಬೇತಿ ಸಂಸ್ಥೆಯಲ್ಲಿ ಶಿಲ್ಪಕಲೆಯ ಡಿಪ್ಲೋಮಾ ಕಲಿಕೆ, ಕಂಚಿನ ಎರಕದ ಶಿಲ್ಪಕಲೆ ಕರಗತ. ಅನಂತರ ಕಲೆಯೇ ಆಸರೆ. ಮೈಸೂರಿನ ಚಾಮುಂಡೇಶ್ವರಿ ತಾಂತ್ರಿಕ ಸಂಸ್ಥೆಯಲ್ಲಿ ಸಹಬೋಧಕನಾಗಿ ನೇಮಕ, ೩೫ ವರ್ಷಗಳ ಸಾರ್ಥಕ ಸೇವೆ. ನೂರಾರು ವಿದ್ಯಾರ್ಥಿಗಳಿಗೆ ತರಬೇತಿ, ಅಸಾಮಾನ್ಯ ಕಲಾಕೃತಿಗಳ ರಚನೆ, ನಾಲ್ಕು ಬಾರಿ ದಸರಾ ಕಲಾಪ್ರದರ್ಶನದಲ್ಲಿ ಪ್ರಶಸ್ತಿ, ಜೀವಮಾನ ಪ್ರಶಸ್ತಿ, ಹೊಯ್ಸಳ, ಚೋಳ, ಪಲ್ಲವ ಶೈಲಿಯಲ್ಲಿ ರಚಿಸಿದ ಕಲಾಕೃತಿಗಳು ನೂರಾರು, ಹತ್ತಾರು ಪ್ರಮುಖ ದೇವಳದಲ್ಲಿ ಪೂಜಿತ. ಆರು ದಶಕದ ಕಲಾಸೇವೆಯ ಧನ್ಯತೆ.