Categories
ನೃತ್ಯ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ನಾಟ್ಯವಿದುಷಿ ಜ್ಯೋತಿ ಪಟ್ಟಾಭಿರಾಮ್

ನೃತ್ಯ ಕ್ಷೇತ್ರದ ಮಹೋನ್ನತ ಸಾಧಕಿ ನಾಟ್ಯಾಚಾರ್ಯ ಜ್ಯೋತಿ ಪಟ್ಟಾಭಿರಾಮ್, ನೂರಾರು ವಿದ್ಯಾರ್ಥಿಗಳ ನೃತ್ಯಗುರು, ಪ್ರತಿಭಾವಂತ ನೃತ್ಯ ಸಂಯೋಜಕಿ
ಶಿವಮೊಗ್ಗ ಜಿಲ್ಲೆ ಸಾಗರದವರು ಜ್ಯೋತಿ ಪಟ್ಟಾಭಿರಾಮ್. ಬಾಲ್ಯದಲ್ಲೇ ಅಜ್ಜಿಯ ಒತ್ತಾಸೆಯಿಂದ ಭಾರತಿ- ಮಣಿಯವರಲ್ಲಿ ನೃತ್ಯಾಭ್ಯಾಸ ಶುರು, ಅನಂತರ ಓಂಕಾರ್, ಮುರಳೀಧರರಾವ್, ಉಪಾದಾತಾರ್, ಎಚ್.ಆರ್. ಕೇಶವಮೂರ್ತಿ, ಕಲಾನಿಧಿ ಮಾಮಿ, ತಂಜಾವೂರಿನ ಕಿಟ್ಟಪ್ಪ ಪಿಳ್ಳೆ ಮುಂತಾದ ಗುರುವರ್ಯರಿಂದ ದಕ್ಕಿಸಿಕೊಂಡ ನೃತ್ಯಕಲಾವಂತಿಕೆ, ಸ್ನಾತಕೋತ್ತರ ಇಂಗ್ಲಿಷ್ ಪದವಿ ಪಡೆದು ಪ್ರಾಧ್ಯಾಪಕಿಯಾಗಿ ವೃತ್ತಿ ಆರಂಭಿಸಿದರೂ ಸೆಳೆತವೆಲ್ಲ ನೃತ್ಯದೆಡೆಗೆ, ಸಾಧನ ಸಂಗಮ ನಾಟ್ಯ ಸಂಸ್ಥೆ ಸ್ಥಾಪಿಸಿ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಅನ್ನದಾಸೋಹ. ನಿರಂತರ ಶಾಸ್ತ್ರೀಯ ನೃತ್ಯೋತ್ಸವಗಳ ಆಯೋಜನೆ, ದೇಶ-ವಿದೇಶಗಳಲ್ಲಿ ನೂರಾರು ನೃತ್ಯಪ್ರದರ್ಶನ, ಅಮೆರಿಕಾದಲ್ಲಿ ನೃತ್ಯ ಕಾರ್ಯಾಗಾರ, ಪ್ರಾತ್ಯಕ್ಷಿಕೆ, ಉಪನ್ಯಾಸಗಳ ನೀಡಿಕೆ, ನ್ಯೂಜೆರ್ಸಿಯಲ್ಲೂ ನೃತ್ಯ ಸಂಸ್ಥೆ ಸ್ಥಾಪನೆ. ಜನಪ್ರಿಯ ನೃತ್ಯರೂಪಕಗಳ ನಿರ್ದೇಶನ, ನಾಟ್ಯಸಂಯೋಜನೆ, ಭರತನಾಟ್ಯ, ಸಂಗೀತ, ಯೋಗ, ಶ್ರೀವಿದ್ಯೆಯ ಧಾರೆಯೆರೆದ ಹೆಗ್ಗಳಿಕೆಯ ನಾಟ್ಯಕಲಾವಿಶಾರದೆ, ‘ಕರ್ನಾಟಕ ಕಲಾಶ್ರೀ’ ಮುಂತಾದ ಪ್ರಶಸ್ತಿ ಪುರಸ್ಕೃತೆ.