Categories
ಚಲನಚಿತ್ರ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ಶೈಲಶ್ರೀ

‘ಸಂಧ್ಯಾರಾಗ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು ನಟಿ ಶೈಲಶ್ರೀ. ಬೆಳ್ಳಿತೆರೆಗೆ ಬರುವ ಮುನ್ನ ಇಂಡಿಯನ್ ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿದ್ದವರು.
ಮನಸ್ಸಿದ್ದರೆ ಮಾರ್ಗ, ಬಂಗಾರದ ಹೂವು, ಜಾಣರ ಜಾಣ ಮುಂತಾದ ಚಿತ್ರಗಳ ಸಣ್ಣ ಪಾತ್ರಗಳಲ್ಲಿ ಗಮನಸೆಳೆದಿದ್ದ ಶೈಲಶ್ರೀ ಅವರು ಆರ್.ಎನ್. ಸುದರ್ಶನ್ ನಾಯಕರಾಗಿದ್ದ ‘ನಗುವ ಹೂವು’ ಚಿತ್ರದ ಮೂಲಕ ನಾಯಕಿಯಾಗಿ ಬಡ್ತಿ ಪಡೆದ ನಟಿ, ಸುವರ್ಣಭೂಮಿ, ಬೋಕರ್ ಭೀಷ್ಮಾಚಾರಿ, ಕಾಡಿನರಹಸ್ಯ, ಮಕ್ಕಳೇ ಮನೆಗೆ ಮಾಣಿಕ್ಯ, ವಂಶಜ್ಯೋತಿ ಸೇರಿದಂತೆ ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹೆಗ್ಗಳಿಕೆ ಶೈಲಶ್ರೀ ಅವರದ್ದು. ಮದರಾಸಿನಲ್ಲಿ ನೃತ್ಯಶಾಲೆ ನಡೆಸಿದ ಭರತನಾಟ್ಯ ಕಲಾವಿದೆ. ಪತಿ ಸುದರ್ಶನ್‌ ರೊಡಗೂಡಿ ನಾಟಕಗಳನ್ನು ಪ್ರದರ್ಶಿಸಿದ ಅಭಿನೇತ್ರಿ ಮಕ್ಕಳಿಗಾಗಿ ‘ಯೂತ್ ಪೀಸ್ ಷೋರ್ಸ್’ ತಂಡ ಕಟ್ಟಿ ಅಭಿನಯ ಕಲೆ ಧಾರೆಯೆರೆದ ಗುರು. ಮಹಿಳೆಯರಿಗಾಗಿ ಸಲಹಾಕೇಂದ್ರವನ್ನೂ ನಡೆಸಿದ ಸಮಾಜಮುಖಿ, ಕನ್ನಡ, ತಮಿಳು, ತೆಲುಗು, ಮಲೆಯಾಳ ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿರುವ ಪಂಚಭಾಷಾ ನಟಿ ಕಿರುತೆರೆಯಲ್ಲೂ ಚಿರಪರಿಚಿತರಾಗಿರುವ ಕಲಾವಿದೆ.