Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಸಿ.ಪಿ. ಸಿದ್ಧಾಶ್ರಮ

ಕನ್ನಡದ ಸಾರಸ್ವತ ಲೋಕ ಕಂಡ ಬಹುಮುಖ ಪ್ರತಿಭೆ ಪ್ರೊ. ಸಿ.ಪಿ. ಸಿದ್ಧಾಶ್ರಮ. ಸಾಹಿತ್ಯಾಧ್ಯಯನ, ಅಧ್ಯಾಪನ ಮತ್ತು ಸಂಶೋಧನಾ ಕ್ಷೇತ್ರದ ಬಹುಶ್ರುತ ಸಾಧಕರು.
ಧಾರವಾಡ ಜಿಲ್ಲೆ, ಹುಲ್ಲಂಬಿ ಗ್ರಾಮದ ಪ್ರೊ. ಚಿದಾನಂದ ಪರಸಪ್ಪ ಸಿದ್ಧಾಶ್ರಮ ಕರ್ನಾಟಕ ಕಲಾ ಕಾಲೇಜಿನಲ್ಲಿ ಪದವಿ, ಮೈಸೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ, ಪಿಎಚ್ಡಿ ಪಡೆದವರು. ಕನ್ನಡ ಉಪನ್ಯಾಸಕ, ಪ್ರವಾಚಕ, ಪ್ರಾಧ್ಯಾಪಕರಾಗಿ ನಾಲ್ಕೂವರೆ ದಶಕಗಳ ಕಾಲದ ಅನನ್ಯ ಸೇವೆ. ಮೈಸೂರು ವಿವಿ ಪ್ರಭಾರ ಕುಲಪತಿ, ಕಲಾನಿಕಾಯದ ಡೀನ್, ಸಿಂಡಿಕೇಟ್ ಸದಸ್ಯ, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಅಪಾರ ಆಡಳಿತಾತ್ಮಕ-ಶೈಕ್ಷಣಿಕ ಅನುಭವ. ವಿಮರ್ಶಕ, ಸಂಶೋಧಕ, ಕವಿ, ಆಧುನಿಕ ವಚನಕಾರ, ಸಂಸ್ಕೃತಿ ಚಿಂತಕರಾಗಿ ಅಮೂಲ್ಯ ಸಾಹಿತ್ಯಾರಾಧನೆ. ಹೊಸ ಅಲೆ, ಹೊಳಹು, ನಿಕಷ, ದಿಟದ ದಿಟ್ಟಿಯ ಪಯಣ ಸೇರಿದಂತೆ ೨೪ ಕೃತಿಗಳ ರಚನಕಾರರು. ಹಲವಾರು ಪ್ರಶಸ್ತಿ- ಗೌರವಗಳಿಂದ ಭೂಷಿತರು. ಭೂಷಿತರ