Categories
ನೃತ್ಯ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಗೀತಾ ಬಾಲಿ

ಅಂಗವಿಕಲರ ಸೇವೆಯೇ ಜೀವನದ ಗುರಿ ಎಂದು ಭಾವಿಸಿ, ತಮ್ಮ ಜೀವನವನ್ನು ಅಂಗವಿಕಲ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಮುಡುಪಿಟ್ಟ ಶಾಸ್ತ್ರೀಯ ನೃತ್ಯಪಟು ಗೀತಾ ಬಾಲಿ ಅವರು.
ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಾದ ಭರತನಾಟ್ಯ ಮತ್ತು ಕೂಚುಪುಡಿ ನೃತ್ಯಗಳಲ್ಲಿ ಪರಿಣತಿ ಪಡೆದಿರುವ ೫೮
ವರ್ಷದ ಗೀತಾ ಬೆಂಗಳೂರಿನವರು.
ಅವರು ಕಳೆದ ೪೦ ವರ್ಷಗಳಿಂದ ನೃತ್ಯ ಕ್ಷೇತ್ರದ ಸಾಧನೆಯಲ್ಲಿ ತೊಡಗಿರುವರು. ಶ್ರೀ ರಮಣ ಮಹರ್ಷಿ ಅಂಧರ ಅಕಾಡೆಮಿಯ ಮಕ್ಕಳಿಗೆ ನೃತ್ಯ ಶಿಕ್ಷಣ ಧಾರೆಯೆರೆಯುತ್ತಿರುವರು. ನೃತ್ಯ ಕಲಿತ ಅಂಧ ಮಕ್ಕಳು ಹಲವೆಡೆ ಕಾರ್ಯಕ್ರಮ ನೀಡಿ ಮೆಚ್ಚುಗೆಗೆ ಪಾತ್ರರು.
ಗೀತಾ ಅವರು ನೃತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪರಿಮಿತ ಸೇವೆಗಾಗಿ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ೨೦೦೧ನೇ ಸಾಲಿನ ಕೆಂಪೇಗೌಡ ಪ್ರಶಸ್ತಿ ಹಾಗೂ ೨೦೦೩ರಲ್ಲಿ ರಾಜ್ಯ ಸರ್ಕಾರದಿಂದ ವಿಶೇಷ ಶಿಕ್ಷಕಿ ಪ್ರಶಸ್ತಿಗಳು ಸಂದಿವೆ.
ಕಲಿತ ವಿದ್ಯೆ, ಕಲೆಯನ್ನು ಇತರರಿಗೆ ಕಲಿಸಿಕೊಟ್ಟಾಗ ಜ್ಞಾನ ದಿಗಂತ ವಿಸ್ತರಿಸುವುದು ಎಂಬ ಮಾತಿನಂತೆ ಬದುಕುತ್ತಿರುವವರು ನೃತ್ಯ ಕಲಾವಿದೆ ಶ್ರೀಮತಿ ಗೀತಾ ಬಾಲಿ.