Categories
ಕೃಷಿ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀಮತಿ ಮೀರಾತಾಯಿ ಕೊಪ್ಪಿಕ‌ರ್‌

ಯಾವ ಪುರುಷನಿಗೂ ಕಡಿಮೆ ಇಲ್ಲದಂತೆ ಕೃಷಿ ನಂಬಿ ದುಡಿಯುತ್ತಿರುವ ಭೂಮಿ ತೂಕದ ಮಹಿಳೆ ಶ್ರೀಮತಿ ಮೀರಾತಾಯಿ ಕೊಪ್ಪಿಕರ್ ಅವರು.
ಧಾರವಾಡ ಜಿಲ್ಲೆಯಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಮೀರಾತಾಯಿ ಅವರು, ಓದಿನ ಹಂಬಲಕ್ಕಿಂತ ಹೆಚ್ಚಾಗಿ ಕೃಷಿ ಕಡೆಗೆ ಒಲಿದವರು. ಮಲೆನಾಡು, ಬಯಲು ಸೀಮೆಗಳೆರಡನ್ನು ಹೊದ್ದಿರುವ ಗಂಡು ಮೆಟ್ಟಿನ ನಾಡಾದ ಧಾರವಾಡದಲ್ಲಿ ಕೃಷಿ ಮಾಡುವುದೆಂದರೆ ಅವರಿಗದು ಬದುಕಿನ ಪರಿ.
ಹಸಿರು ಕ್ರಾಂತಿ ಮತ್ತು ಜಾಗತೀಕರಣದ ನಾಗಾಲೋಟದಲ್ಲಿ ಅತಿಯಾದ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುತ್ತ ಮೂಲತಳಿಗಳನ್ನೇ ಕಳೆದುಕೊಳ್ಳುತ್ತಿದ್ದ ಕೃಷಿ ಕ್ಷೇತ್ರದಲ್ಲಿ ಸದ್ದಿಲ್ಲದೇ ದೇಸಿ ತಳಿಗಳನ್ನು ಸಂರಕ್ಷಿಸುತ್ತ ಸಾವಯವ ಕೃಷಿಯಲ್ಲಿ ತೊಡಗಿಕೊಂಡವರು. ಸಾವಯವ ಕೃಷಿಯಲ್ಲಿ ಇವರು ಮಾಡಿದ ಮೌನಕ್ರಾಂತಿ ನಾಡಿನ ನೂರಾರು ಕೃಷಿಕರಲ್ಲಿ ಬದುಕಿನ ಭರವಸೆ ಮೂಡಿಸಿದೆ.
ಸಾವಯವ ಕೃಷಿಯಲ್ಲಿ ಶ್ರೀಮತಿ ಮೀರಾತಾಯಿ ಕೊಪ್ಪಿಕರ್ ಅವರು ಮಾಡಿರುವ ಸಾಧನೆ ಬಸವಳಿದ ಬಡರೈತರಿಗೆ ಹೊಸ ದಾರಿದೀಪ.