Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀಮತಿ ಶಾಂತಾ ಆನಂದ

ಸಂಗೀತ ಕ್ಷೇತ್ರದ ಸಾಧನೆಯ ಜತೆಗೆ ಚುಟುಕ ಕವನ ರಚನೆ ಮತ್ತು ಸಮಾಜ ಸೇವೆಯಲ್ಲಿ ನಿರತರಾದವರು ಶ್ರೀಮತಿ
ಶಾಂತಾ ಆನಂದ್ ಅವರು.
೧೯೬೩ರಲ್ಲಿ ಬಳ್ಳಾರಿ ಜಿಲ್ಲೆ ಕೂಡ್ಲಿಗೆ ತಾಲ್ಲೂಕಿನ ಕೊಟ್ಟೂರಿನಲ್ಲಿ ಜನನ. ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ. ಗುರು ಹುಮಾಯೂನ್ ಹರ್ಲಾಪುರ ಅವರ ಬಳಿ ಸುಗಮ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ.
ಭದ್ರಾವತಿ ಆಕಾಶವಾಣಿಯಲ್ಲಿ ಗಾಯಕಿಯಾಗಿ, ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀರಾಮ ಮಂದಿರದಲ್ಲಿ ವಚನ ಗಾಯನ, ಮಲೆನಾಡು ಉತ್ಸವದಲ್ಲಿ ಜಾನಪದ ಗೀತ ಗಾಯನ ನೀಡಿದ ಹಿರಿಮೆ ಶಾಂತಾ ಆನಂದ್ ಅವರದು.
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ನಿರ್ದೇಶಕಿಯಾಗಿ, ಗಾನಯೋಗಿ ಪಂಚಾಕ್ಷರ ಗವಾಯಿ ಸಂಗೀತ ಸೇವಾ ಟ್ರಸ್ಟ್ ಕಾರ್ಯದರ್ಶಿಯಾಗಿ, ಬೆಕ್ಕಿನಕಲ್ಮಠದ ಗುರುಬಸವೇಶ್ವರ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಎರಡು ವರ್ಷ ಸೇವೆ ಸಲ್ಲಿಕೆ.
ರಜತ ಕಲಾಶಾಲೆ ಮೂಲಕ ಶಿಷ್ಯರಿಗೆ ತರಬೇತಿ ನೀಡುತ್ತಿರುವ ಅವರು ಸಂಗೀತ ಸೇವೆಗಾಗಿ ಚನ್ನಗಿರಿ ಹಾಲಸ್ವಾಮಿ ಅವರಿಂದ ವಚನ ಕೋಗಿಲೆ ಬಿರುದಿಗೆ ಹಾಗೂ ಸಾಮಾಜಿಕ ಸೇವೆಗಾಗಿ ಜಗಜ್ಯೋತಿ ಬಸವೇಶ್ವರ ಕಾಯಕಶ್ರೀ ಪ್ರಶಸ್ತಿಗೆ ಭಾಜನರು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಜನಮೆಚ್ಚುಗೆ ಗಳಿಸಿದ ಗಾಯಕಿ ಶ್ರೀಮತಿ ಶಾಂತಾ ಆನಂದ್.