Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಎನ್. ವೆಂಕಟೇಶ್

ಎನ್. ವೆಂಕಟೇಶ್ ಅವರು ಹಿರಿಯ ದಲಿತ ಹೋರಾಟ ಕಾರ್ಯಕರ್ತರಲ್ಲೊಬ್ಬರು. ಎಪ್ಪತ್ತರ ದಶಕದಲ್ಲಿ ರಾಜ್ಯದಾದ್ಯಂತ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಚನೆಗಾಗಿ ಶ್ರಮಿಸಿದ ಎನ್. ವೆಂಕಟೇಶ್ ಸಂಘದ ಮುಂಚೂಣಿಯಲ್ಲಿ ಕೆಲಸ ಮಾಡಿದವರು. ನಿರಂತರವಾಗಿ ದಲಿತ ಸಂಘರ್ಷ ಸಮಿತಿಯ ಸಕ್ರಿಯ ಕಾರ್ಯಕರ್ತರಾಗಿ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡಿರುವ ವೆಂಕಟೇಶ್ ಅನ್ಯಾಯಗಳ ವಿರುದ್ಧ ಈಗಲೂ ದನಿ ಎತ್ತುವುದರಲ್ಲಿ ಮುಂದು.