Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಎಂ.ಎಸ್.ಪ್ರಭಾಕರ್ (ಕಾಮರೂಪಿ)

ಕನ್ನಡ ಸಾಹಿತ್ಯಲೋಕದಲ್ಲಿ ‘ಕಾಮರೂಪಿ’ ಕಾವ್ಯನಾಮದಿಂದಲೇ ಹೆಸರುವಾಸಿಯಾಗಿರುವ ಎಂ.ಎಸ್.ಪ್ರಭಾಕರ್ರ ಪೂರ್ಣ ಹೆಸರು ಮೊಟ್ಲಹಳ್ಳಿ ಸೂರಪ್ಪ ಪ್ರಭಾಕರ. ೧೯೩೯ರಲ್ಲಿ ಕೋಲಾರದಲ್ಲಿ ಹುಟ್ಟಿದ ಕಾಮರೂಪಿ ಕನ್ನಡ ಸಾಹಿತ್ಯಕ್ಕೆ ಹೊಸ ಸಂವೇದನೆ ತಂದುಕೊಟ್ಟವರು.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ಪಡೆದವರು. ೧೯೬೨ರಿಂದ ೬೫ರವರೆಗೆ ಗೌಹಾತಿ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದಲ್ಲಿ ಅಧ್ಯಾಪಕರಾಗಿ, ರೀಡರ್ ಆಗಿ ಸೇವೆ ಸಲ್ಲಿಸಿದವರು. ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ವಾರಪತ್ರಿಕೆಯ ಸಹಾಯಕ ಸಂಪಾದಕ-ಹಿಂದೂ ಪತ್ರಿಕೆಯ ಈಶಾನ್ಯ ಭಾರತ-ದಕ್ಷಿಣ ಭಾರತದ ವಿಶೇಷ ಬಾತ್ಮೀದಾರರಾಗಿ ಸೇವೆಗೈದು ನಿವೃತ್ತರಾದವರು.
ಪ್ರಭಾಕರ್ ಅವರು ಬರೆದದ್ದು ಕಡಿಮೆಯೇ. ಒಂದು ತೊಲ ಪುನುಗು ಮತ್ತು ಇತರೆ ಕಥೆಗಳು, ಕುದುರೆಮೊಟ್ಟೆ, ಅಂಜಿಕಿನ್ಯಾತಕಯ್ಯೋ ಕಿರುಕಾದಂಬರಿ ಇವರ ಕೃತಿಗಳು ಸದ್ಯ ‘ಕಾಮರೂಪಿ’ ಬ್ಲಾಗ್ನಲ್ಲಿ ಬರವಣಿಗೆ, ಹೊಸತನ, ವ್ಯಂಗ್ಯ, ತಮಾಷೆಯ ಮೂಲಕ ಜೀವನವನ್ನು ನೋಡುವ ದೃಷ್ಟಿಕೋನ ಅವರ ಬರಹದ ವಿಶೇಷ ಶಕ್ತಿ.