Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ನಮ ಶಿವಾಯಂ ರೇಗುರಾಜ್

ಸಮಾಜಸೇವೆ ಮತ್ತು ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಗುರುತು ಮೂಡಿಸಿರುವವರು ನಮ ಶಿವಾಯಂ ರೇಗುರಾಜ್. ಪ್ರತಿಷ್ಠಿತ ನಿಟ್ಟೂರ್ ತಾಂತ್ರಿಕ ತರಬೇತಿ ಫೌಂಡೇಶನ್ನ ವೈವಸ್ಥಾಪಕ ನಿರ್ದೇಶಕರು.
೧೯೪೨ರ ಆಗಸ್ಟ್ ೬ರಂದು ತಮಿಳುನಾಡಿನ ಕೋಟ್ರಲಂನಲ್ಲಿ ಜನಿಸಿದ ರೇಗುರಾಜ್ ಅವರು ಭಾರತೀಯ ಸೇವೆಯ ನಿವೃತ್ತ ಮೇಜರ್ ಕೆ. ನಮಶಿವಾಯಂರ ಸುಪುತ್ರರು. ಚೆನ್ನೈನಲ್ಲಿ ೧೯೬೩ರಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ರೇಗುರಾಜ್ ಅವರು ತಾನ್ಸಿ ಟೂಲ್ ರೂಂನಲ್ಲಿ ಉದ್ಯೋಗಕ್ಕೆ ಸೇರಿದರು. ಆಟೋಮೊಬೈಲ್ ಇಂಜಿನಿಯರಿಂಗ್ನಲ್ಲಿ ಸ್ವಯಂ ಆಸಕ್ತಿ ಬೆಳೆಸಿಕೊಂಡ ಅವರು ೧೯೬೭ರಲ್ಲಿ ನಿಟ್ಟೂರ್ ಟೆಕ್ನಿಕಲ್ ಟ್ರೈನಿಂಗ್ ಫೌಂಡೇಷನ್ಗೆ ವಾಣಿಜ್ಯ ವ್ಯವಸ್ಥಾಪಕರಾಗಿ ಸೇರಿದರು. ಯುವಪೀಳಿಗೆಗೆ ಡೈ ಮೇಕಿಂಗ್ ಮತ್ತು ಟೂಲ್ ಮೇಕಿಂಗ್ನಲ್ಲಿ ತರಬೇತಿ ನೀಡುವ ಜವಾಬ್ದಾರಿ ವಹಿಸಿಕೊಂಡರು. ಆನಂತರದ್ದು ನಿರಂತರ ಸೇವೆ. ದೇಶದ ೧೫ ಕೇಂದ್ರಗಳಲ್ಲಿ ೧೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಹೆಗ್ಗಳಿಕೆಯ ರೇಗುರಾಜ್ ಅವರು ಪ್ರತಿಷ್ಠಿತ ರಾಷ್ಟ್ರಪತಿ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ-ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.