Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಸಂಕೀರ್ಣ

ಶ್ರೀ ಪಿ. ರಾಮದಾಸ್

ಕೈಗಾರಿಕಾ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ನೀಡಿರುವ ಸಾಧಕರು ಪಿ.ರಾಮದಾಸ್, ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೂ ವಿಸ್ತಾರಗೊಂಡ ಬಹುಮುಖ ಪ್ರತಿಭೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆ ಸಮೀಪದ ಪುತ್ತಿಗೆ ಗ್ರಾಮದವರಾದ ಪಿ.ರಾಮದಾಸ್ ೧೯೪೬ರಲ್ಲಿ ಜನಿಸಿದರು. ಮೂಡಬಿದರೆಯಲ್ಲಿ ಪ್ರಾಥಮಿಕ ಶಿಕ್ಷಣ, ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪೂರೈಸಿ ಸುರತ್ಕಲ್ನ ಕೆಆರ್ಇಸಿ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದವರು. ಮೆಷಿನ್ ಟೂಲ್ಸ್ನಲ್ಲಿ ಎಂ.ಟೆಕ್ ಮಾಡಿದ ಅವರು ೧೯೭೦ರಲ್ಲಿ ಎಚ್ಎಂಟಿಯಲ್ಲಿ ವೃತ್ತಿಜೀವನ ಆರಂಭ. ೧೩ ವರ್ಷಗಳ ನಿರಂತರ ಸೇವೆ. ಬಳಿಕ ಕೊಲ್ಕತ್ತಾದ ಎಂಎಂಸಿಯಲ್ಲಿ ಮುಖ್ಯ ಡಿಸೈನ್ ಇಂಜಿನಿಯರ್ ಆಗಿ ಸೇವೆ. ೧೯೯೪ರಲ್ಲಿ ತಮ್ಮದೇ ಎಎಂಎಸ್ ಸ್ಥಾಪನೆ. ಶೇ. ೯೦ಕ್ಕೂ ಅಧಿಕ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವಿಕೆ. ೧೫೦೦ಕ್ಕೂ ಹೆಚ್ಚು ಕುಟುಂಬಗಳಿಗೆ ಆಸರೆಯಾಗಿರುವ ಅವರು ಸಂಸ್ಥೆಯನ್ನು ೫೦೦ ಕೋಟಿ ರೂ. ವಹಿವಾಟಿನ ಮಟ್ಟಕ್ಕೆ ಬೆಳೆಸಿದ ಕೀರ್ತಿ ಪಡೆದಿದ್ದಾರೆ. ಧಾರ್ಮಿಕ, ಪರಿಸರ ಮತ್ತು ಸಾಮಾಜಿಕ ಕ್ಷೇತ್ರದಲ್ಲೂ ಸೇವೆಗೈದಿರುವ ಅವರು ಭೀಷ್ಮ ಪಿತಾಮಹ, ಕೈಗಾರಿಕಾ ರತ್ನ ಪ್ರಶಸ್ತಿ ಪುರಸ್ಕೃತರು ಸಹ.