Categories
ನೃತ್ಯ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪಿ.ಸಿ. ಸುಬ್ರಹ್ಮಣ್ಯ

– ನೃತ್ಯ ಪ್ರಕಾರವನ್ನು ಪೋಷಿಸಿಕೊಂಡು ಬರುತ್ತಿರುವ ಸ್ವತಃ ಉತ್ತಮ ನೃತ್ಯಪಟು ಶ್ರೀ ಪಿ.ಸಿ. ಸುಬ್ರಹ್ಮಣ್ಯಮ್ ಅವರು.
ಸುಮಾರು ೬೦ ವರ್ಷದ ಹಿಂದೆ ಪಣಂಬೂರಿನಲ್ಲಿ ಜನನ, ವಿದ್ವಾನ್ ಸಿ. ರಾಧಾಕೃಷ್ಣ ಮತ್ತು ದಿವಂಗತ ವಿ.ಸಿ. ಲೋಕಯ್ಯ ಅವರ ಬಳಿ ಭರತನಾಟ್ಯದ ಕಲಿಕೆ. ವಿದ್ವಾನ್ ಜೆ.ವಿ. ರಮಣಮೂರ್ತಿ ಹಾಗೂ ಡಾ. ಪದ್ಮಾಸುಬ್ರಹ್ಮಣ್ಯಮ್ರವರ ಬಳಿ ಕೂಚಿಪುಡಿ ಮತ್ತು ಭರತನಾಟ್ಯದ ತರಬೇತಿ, ಶ್ರೀ ಬಳ್ಳಾರಿ ಸಹೋದರರು ಮತ್ತು ಶ್ರೀ ನಾರಾಯಣ ಮೂರ್ತಿಗಳ ಬಳಿ ಸಂಗೀತಾಭ್ಯಾಸ
೧೯೮೭ರಲ್ಲಿ ಭಾರತ – ರಷ್ಯಾ ಸಾಂಸ್ಕೃತಿಕ ಉತ್ಸವದಲ್ಲಿ ಕಲಾವಿದರ ತಂಡದ ಹೊಣೆಗಾರಿಕೆಯನ್ನು ಹೊತ್ತು ಶಾಸ್ತ್ರೀಯ ಮತ್ತು ಜನಪದ ನೃತ್ಯ ಪ್ರದರ್ಶನ ನೀಡಿದ್ದಾರೆ. ರಷ್ಯಾ ಕಲಾವಿದರುಗಳಿಗೆ ನೃತ್ಯಭ್ಯಾಸದ ಮಾರ್ಗದರ್ಶನ ಮಾಡಿದ್ದಾರೆ.
ನೃತ್ಯಗಾರರಾದರೂ ಕೇವಲ ನೃತ್ಯ ಪ್ರದರ್ಶನಕ್ಕೆ ಸೀಮಿತವಾಗದೆ ಹಲವಾರು ಸಂಘ ಸಂಸ್ಥೆಗಳನ್ನು ಕಟ್ಟಿ ನೃತ್ಯ ನಾಟಕಗಳಿಗೆ ನಿರ್ದೆಶನ ಮಾಡುವ ನೃತ್ಯ ಸಂಯೋಜಿಸುವುದರ ಜೊತೆಗೆ ಪ್ರತಿಭಾನ್ವಿತ ಯುವ ಕಲಾವಿದರಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ವೇದಿಕೆಯನ್ನು ಒದಗಿಸುತ್ತಿರುವ ನೃತ್ಯ ಪಟು ಮತ್ತು ಕಲಾ ವಿಮರ್ಶಕ ಶ್ರೀ ಪಿ. ಸಿ. ಸುಬ್ರಹ್ಮಣ್ಯಮ್
ಅವರು.