Categories
ಕರಕುಶಲಕಲೆ ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಪುಟ್ಟರಾಜು

ನೈಸರ್ಗಿಕ ಮರಗಳ ಬಣ್ಣ ಬಣ್ಣದ ಚಕ್ಕೆಗಳನ್ನು ಬಳಸಿ ಉಬ್ಬುಚಿತ್ರ ತಯಾರಿಸುವ ವಿಶಿಷ್ಟ ಕಲಾವಿದ ಆರ್.ಪುಟ್ಟರಾಜು. ೧೯೩೮ರಲ್ಲಿ ಚಾಮರಾಜನಗರ ಜಿಲ್ಲೆ ಮುಳ್ಳೂರಿನಲ್ಲಿ ಜನನ. ಸದ್ಯ ಅವರು ಮೈಸೂರು ನಿವಾಸಿ. ‘ಕಾವಾ’ದಲ್ಲಿ ಕುಂದಕಲೆಯಲ್ಲಿ ಡ್ರಾಯಿಂಗ್ ಮತ್ತು ಪೇಂಟಿಂಗ್ ತರಬೇತಿ. ೧೪೬೪ರಲ್ಲಿ ಅವರು ತಯಾರಿಸಿದ ಉಬ್ಬು ಚಿತ್ರ ಡಿವೋಷನ್ ಅಮೇರಿಕಾದ ಷಿಕಾಗೋ ಪಟ್ಟಣದಲ್ಲಿ ಪ್ರದರ್ಶನ ಭಾಗ್ಯ ಕಂಡು ಮೆಚ್ಚುಗೆ ಪಡೆದ ಶ್ರೇಷ್ಠ ಕೃತಿ.
ಈವರೆಗೂ ಒಂದು ಸಾವಿರಕ್ಕೂ ಹೆಚ್ಚಿನ ಉಬ್ಬು ಚಿತ್ರ ತಯಾರಿಸಿರುವ ಅವರು ಯಾವುದೇ ವಸ್ತು ವಿಷಯ ನೀಡಿದರೂ ಕೃತಕ ಬಣ್ಣಗಳ ಹಂಗಿಲ್ಲದೇ ನೈಸರ್ಗಿಕ ಮರದ ಬಣ್ಣದ ಚಕ್ಕೆಗಳಿಂದ ಉಬ್ಬು ಚಿತ್ರ ತಯಾರಿಸುವುದರಲ್ಲಿ ನಿಷ್ಣಾತರು. ಅವರು ಆವಿಷ್ಕರಿಸಿರುವ ಭಾವಚಿತ್ರ ಮತ್ತು ಉಬ್ಬುಚಿತ್ರ ಮಾದರಿಗಳು ನೂರಾರು ಮಂದಿಯ ಜೀವನೋಪಾಯಕ್ಕೆ ಸಹಕಾರಿ. ಪುಟ್ಟರಾಜು ಅವರು ತಯಾರಿಸಿರುವ ಉತ್ತಮ ಕಲಾಕೃತಿಗಳಿಗೆ ಮೈಸೂರು ದಸರಾ ಪ್ರಶಸ್ತಿ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಅನೇಕ ಸಂಸ್ಥೆಗಳಿಂದ ಗೌರವ.
ಮಳೆ, ಗಾಳಿ, ಬೆಂಕಿ, ನೀರು, ಇಬ್ಬನಿ, ಚಳಿ, ಬಗೆ, ದಾಹ ಇವೆ ಮೊದಲಾದ ವಿಷಯಗಳ ಬಗೆಗೆ ಶ್ರೀಯುತರು ತಯಾರಿಸಿರುವ ಎಲ್ಲ ಕಲಾಕೃತಿಗಳು ವಿಶಿಷ್ಟ.
ನೈಸರ್ಗಿಕ ಮರಗಳ ಚಕ್ಕೆಗಳೂ ಕಲಾವಿದನ ಕೈಗೆ ಸಿಕ್ಕರೆ ಅದ್ಭುತ ಕಲಾಕೃತಿಯಾಗಿ ರೂಪುಗೊಳ್ಳಬಲ್ಲವು ಎಂಬ ಕಲಾವಂತಿಕೆಯನ್ನು ಮೆರೆದವರು ಶ್ರೀ ಆರ್. ಪುಟ್ಟರಾಜು.