Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಶ್ರೀ ಬಸವಪ್ರಭು ಲಕಮ ಗೌಡ ಪಾಟೀಲ್

ದೇವದಾಸಿ ಮುಗ್ಧ ಹೆಣ್ಣು ಮಕ್ಕಳ ವಿಮೋಚನೆ ಹಾಗೂ ಪುನರ್ವಸತಿಗಾಗಿ ಶ್ರೀ ಬಸವಪ್ರಭು ಲಕಮಗೌಡ ಪಾಟೀಲರು ಹಗಲಿರುಳು ದುಡಿದು ‘ವಿಮೋಚನಾ ದೇವದಾಸಿ ಪುನರ್ವಸತಿ ಸಂಘವನ್ನು ಕಟ್ಟಿದರು.
ಮೂಲತ: ವಕೀಲರಾಗಿರುವ ಪಾಟೀಲರು ಅಥಣಿಯಲ್ಲಿ ಸುಮಾರು ಸಾವಿರಕ್ಕೂ ಅಧಿಕ ದೇವದಾಸಿಯರಿಗೆ ‘ವಿಮೋಚನಾ ಸಂಸ್ಥೆಯಿಂದ ನೆಲೆ ಒದಗಿಸಿಕೊಟ್ಟಿದ್ದಾರೆ. ತಾಲ್ಲೂಕಿನ ೭೦ ಕ್ಕೂ ಮೀರಿ ಹೆಚ್ಚಿನ ಹಳ್ಳಿಗಳಲ್ಲಿ ಸಾವಿರಾರು ಕುಟುಂಬಗಳನ್ನು ಆಯ್ದುಕೊಂಡು ಅವರ ರಕ್ಷಣೆಯ ಭಾರ ಹೊರಲಾಗಿದೆ. ದೇವದಾಸಿಯರಿಗೆ ವಿದ್ಯಾಭ್ಯಾಸ, ಹೊಲಿಗೆ, ಹೈನುಗಾರಿಕೆ, ಕಸೂತಿ ಮುಂತಾದ ತರಬೇತಿಗಳನ್ನು ಕೊಟ್ಟು ಅವರು ಸ್ವಾವಲಂಬಿ ಬದುಕನ್ನು ನಡೆಸಲು ಅನುವು ಮಾಡಿಕೊಡಲಾಗಿದೆ. ದೇವದಾಸಿಯರ ಹೆಣ್ಣು ಮಕ್ಕಳಿಗೆ ಪಾಟೀಲರು ಮದುವೆ ಮಾಡಿಸಿ ಹೊಸ ಬದುಕಿಗೆ ದಾರಿ ಮಾಡಿಕೊಟ್ಟಿದ್ದಾರೆ. ದೇಶದ ಏಕೈಕ ದೇವದಾಸಿ ಮಕ್ಕಳ ವಸತಿ ಶಾಲೆ ಕಟ್ಟಿಸಿದ್ದು ಅದು ೩೦ ವರ್ಷಗಳನ್ನು ದಾಟಿದೆ.