Categories
ಚಿತ್ರಕಲೆ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬಸವರಾಜ ರೇವಣಸಿದ್ದಪ್ಪ ಉಪ್ಪಿನ

ಚಿತ್ರಕಲೆಯನ್ನು ಬದುಕಿನ ಧ್ಯಾನವಾಗಿಸಿಕೊಂಡವರು ಬಸವರಾಜ ರೇವಣಸಿದ್ದಪ್ಪ ಉಪ್ಪಿನ, ಚಿತ್ರಕಲಾ ಶಿಕ್ಷಕ, ಕಲಾವಿದರಾಗಿ ಹೆಜ್ಜೆಗುರುತಿನ ಸಾಧಕರು.
ಕಲಬುರಗಿ ಜಿಲ್ಲೆಯ ನದಿಶಿಣ್ಣೂರಿನಲ್ಲಿ ೧೯೪೫ರ ಜೂನ್ ೧೮ರಂದು ಜನಿಸಿದ ಬಸವರಾಜ ರೇವಣಸಿದ್ದಪ್ಪ ಉಪ್ಪಿನ ಅವರಿಗೆ ಬಾಲ್ಯದಿಂದಲೂ ಕುಂಚ ಮತ್ತು ಬಣ್ಣಗಳೆಡೆಗಿನ ಮೋಹ, ಕಲಬುರಗಿಯ ದಿ ಐಡಿಯಲ್ ಆರ್ಟ್ ಇನ್ಸ್ಟಿಟ್ಯೂಟ್ನಲ್ಲಿ ಚಿತ್ರಕಲೆಯಲ್ಲಿ ಡಿಪ್ಲೋಮಾ ಕೋರ್ಸ್ ಕಲಿಕೆ. ಅದೇ ಸಂಸ್ಥೆಯಲ್ಲಿ ಕಲಾಶಿಕ್ಷಕರಾಗಿ ವೃತ್ತಿಬದುಕಿನಾರಂಭ. ಕಲಿಕೆಯ ದಾಹಕ್ಕೆ ನವದೆಹಲಿಯ ಸಿಸಿಆರ್ಟಿಯಲ್ಲಿ ವಿಶೇಷ ಕೋರ್ಸ್ ಹಾಗೂ ಕಲಬುರಗಿ ವಿವಿಯಲ್ಲಿ ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ. ೧೯೭೧ರಿಂದ ೨೦೦೩ರವರೆಗೆ ಸರ್ಕಾರಿ ಪ್ರೌಢಶಾಲಾ ಕಲಾಶಿಕ್ಷಕನಾಗಿ ಸೇವೆ. ರೋಹಿತ್ ಕಲಾವೃಂದ ಹಾಗೂ ಕರ್ನಾಟಕ ರೋಹಿತ್ ಕಲಾವೃಂದ ಸಂಸ್ಥೆಯ ಸಂಸ್ಥಾಪಕರು. ಬೋಧನೆಯ ಜೊತೆಜೊತೆಗೆ ಕಲಾಕೃತಿಗಳ ರಚನೆಯಲ್ಲೂ ತೊಡಗಿದ ಅವರು ಕರ್ನಾಟಕ ಮಾತ್ರವಲ್ಲದೆ, ಹೈದರಾಬಾದ್ ಮತ್ತಿತರೆಡೆ ಏಕವ್ಯಕ್ತಿ ಪ್ರದರ್ಶನ, ದಕ್ಷಿಣ ಕೋರಿಯಾ ಸೇರಿ ಹಲವೆಡೆ ಸಮೂಹ ಚಿತ್ರಕಲಾ ಪ್ರದರ್ಶನ ಮಾಡಿದ್ದು ಚಿತ್ರಕಲೆಯ ಕುರಿತು ಹಲವು ಲೇಖನಗಳನ್ನು ಪ್ರಕಟಿಸಿದ್ದಾರಲ್ಲದೆ, ಹತ್ತಾರು ಗೌರವಗಳಿಗೂ ಭಾಜನರು.