Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಬಸಣ್ಣ ಕಾಳಪ್ಪ ಕಂಚಗಾರ

ಸಗರನಾಡೆಂದೇ ಜನಪ್ರಿಯವಾದ ಸುರಪುರ ತಾಲ್ಲೂಕಿನ ಕೊಡೇಕಲ್ನ ಶಿಲ್ಪಕಲಾವಿದ ಬಸಣ್ಣ ಕಾಳಪ್ಪ ಕಂಚಗಾರ ಅವರು ಬಹುಮುಖ ಪ್ರತಿಭೆ, ಬಹುಶ್ರುತ ಸಾಧನೆ.
ಶಿಲ್ಪಕಲೆ ಬಸಣ್ಣರಿಗೆ ಅಪ್ಪನಿಂದ ಬಂದ ಬಳುವಳಿ, ತಂದೆಯ ಆಕಾಲಿಕ ನಿಧನದಿಂದ ನಾಲ್ಕನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ ಇವರು ಆನಂತರ ನೆಚ್ಚಿಕೊಂಡಿದ್ದು ಶಿಲ್ಪಕಲೆಯನ್ನೇ ಬಡಗಿತನ, ಕಂಚುಗಾರಿಕೆಯಲ್ಲಿ ಪಳಗಿರುವ ಅವರು ಗ್ರಾಮದೇವತೆಗಳಾದ ಶ್ರೀದೇವಿ ದುರಗಮ್ಮ, ಕೆಂಚಮ್ಮ, ಆಚಜನೇಯ ಮುಂತಾದ ದೇವರುಗಳ ಕಾಷ್ಠಶಿಲ್ಪ, ಕಂಡು ಮತ್ತು ಕಲ್ಲಿನ ಮೂರ್ತಿಯನ್ನು, ಕಂಚಿನ ಲೋಹದಲ್ಲಿ ಕೊಡೇಕಲ್ ಬಸವಣ್ಣ, ಅಶ್ವಾರೂಢ ಮಲ್ಲಯ್ಯ, ಕಾಳಿಕಾದೇವಿ ಅನ್ನಪೂರ್ಣೇಶ್ವರಿ, ಮೌನೇಶ್ವರ ವಿಗ್ರಹಗಳನ್ನೂ ಸಿದ್ಧಪಡಿಸಿರುವುದು ಇವರ ಕಲಾಪ್ರೌಢಿಮೆಗೆ ಸಾಕ್ಷಿ. ಕಲಾಕೃತಿಗಳ ರಚನೆ ಮಾತ್ರವಲ್ಲದೆ, ಜ್ಯೋತಿಷ್ಯಶಾಸ್ತ್ರ, ವಾಸ್ತು, ನಾಟಿ ವೈದ್ಯ, ನಾಟಕ ರಚನಾ ಕಲೆಯನ್ನು ಕರಗತ ಮಾಡಿಕೊಂಡಿರುವುದು ವಿಶೇಷ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಪ್ರಶಸ್ತಿ ಹಾಗೂ ಅನೇಕ ಗೌರವಗಳಿಗೆ ಪಾತ್ರವಾಗಿರುವ ಕಲಾಚೇತನ.