Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಶ್ರೀ ಯಮನಪ್ಪ ಪಾಂಡಪ್ಪ ಚಿತ್ರಗಾರ

ಶಿಲ್ಪಕಲಾವಿದ ಯಮನಪ್ಪ ಪಾಂಡಪ್ಪ ಚಿತ್ರಗಾರ ಗದಗ ಜಿಲ್ಲೆಯ ಪ್ರತಿಭೆ. ಗೊಂಬೆಗಳ ತಯಾರಿಕೆಯಲ್ಲಿ ಸಿದ್ಧಹಸ್ತರು.
ಗದಗ ಜಿಲ್ಲೆಯ ಗಜೇಂದ್ರಗಡ ಹುಟ್ಟೂರು. ೧೯೨೬ರಲ್ಲಿ ಜನಿಸಿದ ಯಮನಪ್ಪ ಬಾಲ್ಯದಲ್ಲೇ ಕಲೆಯ ಸೆಳೆತಕ್ಕೊಳಗಾದವರು. ಗೊಂಬೆಗಳ ತಯಾರಿಕೆಯಲ್ಲಿ ಪಳಗಿದವರು. ಸಿಮೆಂಟ್ ಶಿಲ್ಪಗಳ ರಚನೆ, ಗ್ರಾಮದೇವತೆಗಳ ಕಲಾಕೃತಿಗಳಿಗೆ ಬಣ್ಣ ಹಚ್ಚುವಿಕೆ, ಗಣೇಶ ಪ್ರತಿಮೆಗಳ ತಯಾರಿಕೆಯಲ್ಲಿ ತೊಡಗಿದವರು. ಹಲವಾರು ದೇವಾಲಯಗಳ ಗೋಪುರಗಳು ಇವರ ಕೈಚಳಕದಿಂದ ನೋಡುಗರ ಕಣ್ಮನ ಸೆಳೆದಿವೆ. ರಾಜ್ಯದ ವಿವಿಧೆಡೆ ಉದ್ಯಾನವನಗಳಲ್ಲಿ ಮಕ್ಕಳ ಆಕರ್ಷಣೆಯ ಕಲಾಕೃತಿಗಳ ರಚಿಸಿರುವ ಇವರ ಕುರಿತ ಅನೇಕ ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಶಸ್ತಿ-ಗೌರವ-ಸನ್ಮಾನಗಳು ಸಾರ್ಥಕತೆಯ ಭಾವ ತಂದಿವೆ. ೯೦ರ ಇಳಿವಯಸ್ಸಿನಲ್ಲೂ ಕಲಾಕೃತಿಗಳ ರಚನೆಯಲ್ಲಿ ತನ್ಮಯರಾಗಿರುವುದು ಇವರ ಕಲಾಬದ್ಧತೆಗೆ ಸಾಕ್ಷಿ.