Categories
ಯಕ್ಷಗಾನ ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ

ಶ್ರೀ ಬೆಳ್ಳಿ ಕಿರೀಟದ ವೆಂಕಟಪ್ಪದಾಸ್

ಶ್ರೀ ವೆಂಕಟಪ್ಪದಾಸ್ ಆಂಜನೇಯ ಪಾತ್ರಕ್ಕೊಂದು ಪರ್ಯಾಯ ಹೆಸರು.

೧೯೧೦ರಲ್ಲಿ ಜನಿಸಿದ ಶ್ರೀಯುತರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲೂಕಿನ ಸಣೇನಹಳ್ಳಿಯ ಕಲಾವಿದರ

ಕುಟುಂಬದಿಂದ ಬಂದವರು.

ಸಾವಿರಾರು ಸಲ ಆಂಜನೇಯನ ಪಾತ್ರವನ್ನು ಅಭಿನಯಿಸಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರಿಂದ ಬೆಳ್ಳಿ ಕಿರೀಟವನ್ನು ತೊಡಿಸಿಕೊಂಡು ಬೆಳ್ಳಿ ಕಿರೀಟದ ವೆಂಕಟಪ್ಪ ಎಂದೇ ಖ್ಯಾತಿವೆತ್ತವರು.

ನಾಟಕದ ಗೀಳಿನೊಂದಿಗೆ ಹರಿಕಥೆ, ಮರಗೆಲಸ, ಆಯುರ್ವೇದ, ಜ್ಯೋತಿಷ್ಯ, ಶಿಲ್ಪಶಾಸ್ತ್ರಹಾಗೂ ಸಮಾಜ ಸೇವೆಯಲ್ಲಿಯೂ ಶ್ರೀಯುತರಿಗೆ ಆಸಕ್ತಿ ೯೨ರ ಇಳಿವಯಸ್ಸಿನಲ್ಲಿಯೂ ಕಿಂಚಿತ್ತೂ ಕುಂದದ ಕಲಾಸಕ್ತಿ, ಇವರು ಯಕ್ಷಗಾನ ಬಯಲಾಟ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಗಾಗಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಹಲವಾರು ಖಾಸಗಿ ಸಂಘ-ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ನಾಟಕ ಚತುರ’, ‘ಯಕ್ಷಗಾನ ಪಿತಾಮಹ’, ‘ಯಕ್ಷಗಾನ ವಿಶಾರದ ಮುಂತಾದ ಬಿರುದುಗಳು ಅವರ ಕಿರೀಟಕ್ಕೆ ಸೇರಿದ ಗರಿಗಳು,

ಆಂಜನೇಯನ ಪಾತ್ರಕ್ಕೆ ಜೀವ ತುಂಬಿದ ಯಕ್ಷಗಾನ ಬಯಲಾಟದ ೯೨ರ ಹರೆಯದ ಕಲಾವಿದ ಬೆಳ್ಳಿ ಕಿರೀಟದ ಶ್ರೀ ವೆಂಕಟಪ್ಪದಾಸ್ ಅವರು.