Categories
ರಾಜ್ಯೋತ್ಸವ 2008 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಶ್ರೀ ವಿಜಯಕುಮಾರ್ ಶೆಟ್ಟಿ

ಮುಂಬೈನಲ್ಲಿ ನಾಟಕ ತಂಡ ರಚಿಸಿ ಕನ್ನಡ ಸಂಸ್ಕೃತಿ, ಕಲೆ, ಶ್ರೇಷ್ಠತೆಯನ್ನು ಉಳಿಸಿ ಬೆಳೆಸುತ್ತಿರುವವರು ತೋನ್ಸೆ ವಿಜಯ ಕುಮಾರ್ ಶೆಟ್ಟಿ ಅವರು.
ಉಡುಪಿ ಜಿಲ್ಲೆಯ ತೋನ್ಸೆ ಗ್ರಾಮದವರಾದ ವಿಜಯ ಕುಮಾರ್ ವಿಜ್ಞಾನ ಪದವೀಧರರು. ಎಳೆವಯಸ್ಸಿನಿಂದಲೂ ರಂಗಭೂಮಿಯಲ್ಲಿ ಆಸಕ್ತಿ ತಳೆದಿದ್ದ ಅವರು, ಪ್ರವೃತ್ತಿಯಾಗಿ ಆಯ್ದುಕೊಂಡಿದ್ದು ರಂಗಭೂಮಿಯನ್ನು.
ಉದ್ಯೋಗ ನಿಮಿತ್ತ ಮುಂಬೈ ವಾಸಿಯಾಗಿರುವ ಅವರು ರಂಗ ಸಾಧಕರ ಸಂಪರ್ಕದಿಂದ ‘ಕಲಾಜಗತ್ತು’ ರಂಗ ತಂಡ ಸ್ಥಾಪನೆ, ಮಕ್ಕಳ ಭವಿಷ್ಯ ನಿರ್ಮಾಣಕ್ಕಾಗಿ ಚಿಣ್ಣರ ಬಿಂಬದ ರಚನೆ ಶ್ರೀಯುತರ ಸಮಾಜಮುಖಿ ನಿಲುವಿಗೆ ಸಾಕ್ಷಿ. ಈವರೆಗೆ ಎರಡು ಸಾವಿರಕ್ಕೂ ಹೆಚ್ಚಿನ ತುಳು-ನಾಟಕಗಳ ಪ್ರದರ್ಶನ ನೀಡಿರುವ ಅವರು ೪೦ಕ್ಕೂ ಹೆಚ್ಚಿನ ಕನ್ನಡ ಮತ್ತು ತುಳು ನಾಟಕ ಕೃತಿಗಳ ಲೇಖಕರು.
‘ಬದಿ’ ತುಳು ನಾಟಕ ಕೃತಿಗೆ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಲಭಿಸಿದೆ. ಶ್ರೀಯುತರ ಸೇವಾ ಮನೋಭಾವಕ್ಕೆ ಮಹಾರಾಷ್ಟ್ರದ ಅಭಿಮಾನಿ ಬಳಗದಿಂದ ತುಳು ನಾಟಕ ಕಲಾರತ್ನ ಪ್ರಶಸ್ತಿ, ಶ್ರೇಷ್ಠ ಹೊರನಾಡ ಕನ್ನಡಿಗ ಗೌರವಗಳು ಸಂದಿವೆ.
ನಟ, ನಿರ್ದೇಶಕ, ಸಂಘಟಕ, ಕಲಾ ಪೋಷಕರಾಗಿ ಅರ್ಥಪೂರ್ಣ ಸೇವೆ ಸಲ್ಲಿಸುತ್ತಿರುವವರು ಶ್ರೀ ತೋನ್ಸೆ ವಿಜಯ ಕುಮಾರ್ ಶೆಟ್ಟಿ.