Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಶ್ರೀ ಸಿದ್ದಪ್ಪ ಬಿದರಿ

ಬಾಗಲಕೋಟೆ ಜಿಲ್ಲೆ ಬೀಳಗಿಯವರಾದ ಶ್ರೀ ಸಿದ್ದಪ್ಪ ಸಾಬಣ್ಣ ಬಿದರಿ ಅವರು ಅನಕ್ಷರಸ್ಥ ಆಶುಕವಿ. ಅಪ್ಪಟ ಕೃಷಿ ಕುಟುಂಬದವರಾದ ಇವರ ಸಾವಿರಾರು ಕವಿತೆಗಳು ೨೩ ಕ್ಕೂ ಹೆಚ್ಚು ಕವನ ಸಂಕಲಗಳನ್ನು ಕನ್ನಡ ಸಾಹಿತ್ಯಕ್ಕೆ ಬಳುವಳಿಯಾಗಿ ನೀಡಿ ಜಾನಪದ ಸಾಹಿತ್ಯದ ಕಣಜವೇ ಆಗಿದ್ದಾರೆ. ಹಳ್ಳಿ ಬದುಕಿನ ಅನುಭವ, ಉತ್ತರ ಕರ್ನಾಟಕದ ಭಾಷೆಯ ಸೊಬಗು, ಇವರ ಕವಿತೆಗಳ ಪ್ರಮುಖ ಆಕರ್ಷಣೆ. ಮೈಸೂರಿನ ದಸರಾ ಕವಿಗೋಷ್ಠಿಯಿಂದ ಹಿಡಿದು ಬೆಳಗಾವಿಯ ೭೦ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯವರೆಗೂ ಹತ್ತಾರು ಕವಿಗೋಷ್ಟಿಗಳಲ್ಲಿ ತನ್ನ ಕವನ ವಾಚನ ಮಾಡಿರುವ ಹೆಗ್ಗಳಿಕೆ ಇವರದು.
‘ಹೊಆಸಾಲ ಹೋರಿ’,’ಹತ್ತೂನ ಬಾ ಪ್ರೀತಿ ಗಾಡಿ’ ಮತ್ತು ಅನುಭವದ ಅಡಿಗಿ’, ‘ಮಾತು ಮಾಣಿಕ್ಯ’, ‘ಕೆರೆಯ ನೀರನು ಕೆರಿಗೆ ಚೆಕ್ಲೀನಿ’ ಹಾಗೂ ‘ಹತ್ತಿತೋ ಉರಿ’ ಇವು ಇವರ ಪ್ರಸಿದ್ಧ ಕವನ ಸಂಕಲನಗಳು. ಹಲವು ಹಾಡುಗಳು ಧ್ವನಿಸುರುಳಿಗಳಾಗಿಯೂ ಹೆಸರು ಮಾಡಿವೆ.