Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ. ಸಿ. ತ್ಯಾಗರಾಜ್

ಕೋಪಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದವರಾದ ಶ್ರೀ.ಸಿ. ತ್ಯಾಗರಾಜ್ ಅವರು, ಖ್ಯಾತ ನಾದಸ್ವರ ವಿದ್ವಾಂಸರು. ಕಳೆದ ೫೦ ವರ್ಷಗಳಿಂದ ರಾಜ್ಯದಾದ್ಯಂತ ಮತ್ತು ಹೊರರಾಜ್ಯಗಳಲ್ಲಿ ನಾದಸ್ವರ ಕಚೇರಿ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮ ಮತ್ತು ಹಂಪಿ ಮಹೋತ್ಸವಗಳಲ್ಲಿ ಹಾಗೂ ಜಾನಪದ ಜಾತ್ರೆಗಳಲ್ಲಿ ಜೊತೆಗೆ ನಾಡಿನ ಹೆಸರಾಂತ ದೇಗುಲಗಳಲ್ಲಿ ನಾದಸ್ವರ ಸೇವೆ ಸಲ್ಲಿಸಿರುವುದು ಇವರ ಹೆಗ್ಗಳಿಕೆ. ಸುಮಾರು ೭೦೦ ಜನ ವಿದ್ಯಾರ್ಥಿಗಳಿಗೆ ಉಚಿತವಾಗಿ ನಾದಸ್ವರ ಕಲೆಯನ್ನು ಕಲಿಸುತ್ತ ಕಲಾಸೇವೆ ಮುಂದುವರೆಸಿದ್ದಾರೆ.
ಇವರ ಪ್ರತಿಭೆಗೆ ಪುರಸ್ಕಾರವಾಗಿ ಕೋಲಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯ ಸವಿತಾ ಕಲಾವಿದರ ಸಮಾವೇಶದಲ್ಲಿ ಕಲಾರತ್ನ ಪ್ರಶಸ್ತಿ, ದಸರಾ ಮಹೋತ್ಸವ ಪ್ರಶಸ್ತಿ, ಹಂಪಿ ಉತ್ಸವ ಪ್ರಶಸ್ತಿಗಳು ಇವರಿಗೆ ಸಂದಿವೆ.