Categories
ರಾಜ್ಯೋತ್ಸವ 2021 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಶ್ರೀ ಹೆರಾಲ್ಡ್ ಸಿರಿಲ್ ಡಿಸೋಜಾ

ಬ್ಯಾಂಡ್ ಮಾಸ್ಟರ್ ಎಂದೇ ಖ್ಯಾತರಾದ ಶ್ರೀ ಹೆರಾಲ್ಡ್ ಸಿರಿಲ್ ಡಿಸೋಜ ಅವರು, ಕಳೆದ ಐವತ್ತು ವರ್ಷಗಳಿಂದ ಬ್ರಾಸ್ ಬಾಂಡ್ ಕಲೆಯಲ್ಲಿ ಸಕ್ರಿಯರಾಗಿದ್ದಾರೆ. ತನ್ನ ಬದುಕಿನ ಬಹುಭಾಗವನ್ನು ವಾದ್ಯ ಸಂಗೀತಕ್ಕಾಗಿಯೇ ವಿನಿಯೋಗಿಸಿದ ಇವರು, ಮೈಸೂರು ಅರಮನೆ ಬ್ಯಾಂಡ್ನಲ್ಲೂ ನುಡಿಸಿದ್ದಾರೆ. ‘ಸಾನಿಧ್ಯ’ ಎನ್ನುವ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿ ಶಾಲೆಯ ಮಕ್ಕಳನ್ನು ತರಬೇತುಗೊಳಿಸಿ, ಕಲಾವಿದರಾಗುವಂತೆ ಮಾಡಿದ್ದಾರೆ. ‘ಹ್ಯಾರಿಸ್ ಸೆಂಚುರಿ ಸಿಲ್ವ ಬ್ಯಾಂಡ್’ ಸ್ಥಾಪಿಸಿ ೧೦೦೦ ಕ್ಕೂ ಹೆಚ್ಚು ಸಂಗೀತಗಾರರನ್ನು ಬ್ಯಾಂಡ್ ನುಡಿಸುವಲ್ಲಿ ತರಬೇತುಗೊಳಿಸಿದ್ದಾರೆ. ನಶಿಸಿ ಹೋಗುತ್ತಿರುವ ಬ್ರಾಸ್ ಬ್ಯಾಂಡ್ ಕಲೆಯನ್ನು ಪುನರುಜ್ಜಿವನಗೊಳಿಸಲು ಶ್ರಮಿಸುತ್ತಿದ್ದಾರೆ.