Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ವೃತ್ತಿ ರಂಗಭೂಮಿ

ಎ.ವರಲಕ್ಷ್ಮೀ

ಚಿಕ್ಕವಯಸ್ಸಿನಿಂದಲೇ ಕಲೆಯಲ್ಲಿ ಆಸಕ್ತಿ ತೋರಿದ ಎ.ವರಲಕ್ಷ್ಮಿ ಅವರು ಬಳ್ಳಾರಿ ಲಲಿತಮ್ಮನವರ ಲಲಿತಕಲಾ ನಾಟ್ಯಮಂಡಳಿಯಲ್ಲಿ ಬಾಲನಟಿಯಾಗಿ ಕಲಾಜೀವನ ಆರಂಭಿಸಿದರು.

ಅವರು ಮುಂದಿನ ದಿನಗಳಲ್ಲಿ ಗುಬ್ಬಿ ಚನ್ನಬಸವೇಶ್ವರ ಕಂಪನಿ, ಮಾಂಡ್ರಾ ಕವಿಯವರ ಕಂಪನಿ, ಏಣಗಿಬಾಳಪ್ಪನವರ ಕಂಪನಿ, ಮೊದಲಾದ ಕಂಪನಿಗಳಲ್ಲಿ ಪ್ರಮುಖ ಪಾತ್ರಧಾರಿಯಾಗಿ ನೋಡುಗರ ಗಮನ ಸೆಳೆದರು.

ವೀರರಾಣಿ ಕಿತ್ತೂರು ಚನ್ನಮ್ಮ ನಾಟಕದಲ್ಲಿ ಇವರು ವೀರಮ್ಮನ ಪಾತ್ರಧಾರಿಯಾಗಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಿದರು. ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ಪಾತ್ರ ನಿರ್ವಹಣೆಯಲ್ಲಿ ವರಲಕ್ಷ್ಮಿಯವರದು ಎತ್ತಿದ ಕೈ.

ಈವರೆಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳು ಇವರಿಗೆ ಸಂದಿವೆ

Categories
ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ ವೃತ್ತಿ ರಂಗಭೂಮಿ

ಗೂಡೂರು ಮಮತಾ

ವೃತ್ತಿ ಹಾಗೂ ಹವ್ಯಾಸ ರಂಗಭೂಮಿಯಲ್ಲಿ ಅಭಿನಯಿಸುತ್ತಿರುವ ಮಮತಾ ಗೂಡೂರು ತಮ್ಮ ಐದನೆಯ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದವರು. ಉತ್ತರ ಕರ್ನಾಟಕದ ಬಹುತೇಕ ವೃತ್ತಿ ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿರುವ ಇವರು ಬಹುತೇಕ ಎಲ್ಲ ನಾಟಕಗಳಲ್ಲಿಯೂ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ.

ಗರೀಬಿ ಹಟಾವೋ, ವಿಧಿಯ ಕೈವಾಡ, ಇಳಕಲ್ ಸೀರೆ, ಪೋಲೀಸನ ಮಗಳು, ರಕ್ತರಾತ್ರಿ ಮೊದಲಾದ ನಾಟಕಗಳಲ್ಲಿ ಮಮತಾ ಅವರು ವಹಿಸಿದ ಪಾತ್ರಗಳು ಪ್ರೇಕ್ಷಕರ ಮನಸೂರೆಗೊಂಡಿದೆ. ಸಾಮಾಜಿಕ, ಐತಿಹಾಸಿಕ, ಭಕ್ತಿ ಪ್ರಧಾನ ಹೀಗೆ ಎಲ್ಲ ಪ್ರಕಾರದ ನಾಟಕಗಳಲ್ಲಿ ಪಾತ್ರ ನಿರ್ವಹಿಸಿರುವ ಅಭಿಜಾತ ಕಲಾವಿದೆ ಮಮತಾ ಅವರು ಹವ್ಯಾಸಿ ನಾಟಕಗಗಳಲ್ಲಿಯೂ ಅಭಿನಯಿಸಿದ್ದಾರೆ.

ಅನೇಕ ಚಲನಚಿತ್ರಗಳಲ್ಲಿಯೂ ಅಭಿನಯಿಸಿರುವ ಮಮತಾ ಅವರಿಗೆ ಎಸ್.ಪಿ.ವರದರಾಜ್ ಗೌರವ ಪ್ರಶಸ್ತಿ, ಅಭಿನಯ ಚತುರೆ ನಾಟ್ಯ ಸರಸ್ವತಿ ಮೊದಲಾದ ಬಿರುದುಗಳು ಲಭಿಸಿವೆ.