Categories
ಕೃಷಿ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಅಬ್ದುಲ್ ಖಾದರ್ ಇಮಾಮಸಾಬ್ ನಡಕಟ್ಟಿನ

ಕೃಷಿಗೆ ಸಂಬಂಧಿಸಿದ ವಿವಿಧ ಯಂತ್ರೋಪಕರಣಗಳನ್ನು ಸ್ವಂತ ಬಂಡವಾಳ ಹೂಡಿ ತಯಾರಿಸಿ ಕೃಷಿಕರಿಗೆ ನೆರವು ನೀಡಿದ ಅಬ್ದುಲ್ ಖಾದರ್ ಇಮಾಂಸಾಬ್ ನಡಕಟ್ಟಿನ ಅವರಿಗೆ ಭಾರತ ಸರ್ಕಾರ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.

ಮುವ್ವತ್ತು ವರ್ಷಗಳಿಂದ ಹೊಸ ಹೊಸ ಕೃಷಿ ಯಂತ್ರೋಪಕರಣಗಳನ್ನು ತಯಾರಿಸಿರುವ ನಡಕಟ್ಟಿನ ಅವರು ಕೂರಿಗೆ, ಕಬ್ಬಿಣದ ನೇಗಿಲ ಗಾಲಿ, ಕಬ್ಬು ಬಿತ್ತುವ ಕೂರಿಗೆ, ರೋಟೋವೇಟರ್‌ ಮೊದಲಾದ ಸರಳ ಯಂತ್ರಗಳನ್ನು ಸಂಶೋಧಿಸಿ ತಯಾರಿಸಿದ್ದಾರೆ.

ತಾವು ಸಿದ್ದಗೊಳಿಸಿದ ಯಂತ್ರೋಪಕರಣಗಳನ್ನು ಪ್ರಯೋಗ ಮಾಡಲು ಸ್ವಂತ ಜಮೀನನ್ನು ಮೀಸಲಾಗಿರಿಸಿರುವ ನಡಕಟ್ಟಿನ ಅವರಿಗೆ ಕೃಷಿ ವಿವಿ ಹಾಗೂ ಕೃಷಿ ಇಲಾಖೆಗಳು ಅನೇಕ ಗೌರವಗಳನ್ನು ನೀಡಿ ಗೌರವಿಸಿವೆ.