Categories
ಕೃಷಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಆಶಾ ಶೇಷಾದ್ರಿ

ಶ್ರೀಮತಿ ಆಶಾ ಶೇಷಾದ್ರಿ ಅವರು ಸಸ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪುಷೋದ್ಯಮದ ಕ್ರಾಂತಿಗೆ ತಮ್ಮ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ. ಆರ್ಥಿಕತೆಗೆ ಹೊಸ ಪ್ರೋತ್ಸಾಹ ಕೊಡುತ್ತಿರುವ ಪುಷ್ಪ ರಫ್ತು ಉದ್ಯಮದಲ್ಲಿಯೂ ಸಾಕಷ್ಟು ಪರಿಣತಿ ಪಡೆದಿರುವ ಆಶಾ ಶೇಷಾದ್ರಿ ಅವರು ಕೃಷಿ ಕ್ಷೇತ್ರದಲ್ಲಿ ವಾಣಿಜ್ಯ ಕೃಷಿಯ ರಬ್ಬರ್, ವೆನಿಲ್ಲಾ, ಅಡಿಕೆ, ಭತ್ತ, ಆರ್ಕಿಡ್‌ಗಳನ್ನು ಬೆಳೆಯುವಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಕಸಿ ಕೃಷಿಯ ಮೂಲಕ ಬಾಳೆ ಹಣ್ಣು ಬೆಳೆಯನ್ನು ಇತರ ತರಕಾರಿ ಬೆಳೆಗಳೊಂದಿಗೆ ಬೆಳೆಯುವ ಹೊಸ ಪದ್ಧತಿಯೊಂದನ್ನು ಕಂಡು ಹಿಡಿದಿರುವ ಆಶಾ ಶೇಷಾದ್ರಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹಾಗೂ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯ ಆಡಳಿತ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.