Categories
ಕೃಷಿ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಎಸ್.ವಿ. ಸುಮಂಗಲಮ್ಮ ವೀರಭದ್ರಪ್ಪ

ಕೃಷಿ ಕ್ಷೇತ್ರದ ಅನನ್ಯ ಸಾಧಕಿಯರಲ್ಲಿ ಚಿತ್ರದುರ್ಗದ ಎಸ್.ವಿ. ಸುಮಂಗಲಮ್ಮ ಪ್ರಮುಖರು. ವಿಶ್ವವಿದ್ಯಾಲಯಕ್ಕೂ ಸಾಟಿ ಇಲ್ಲದಂತಹ ಕೃಷಿ ಕ್ಷೇತ್ರ ಸ್ಥಾಪಿಸಿದ ಹೆಮ್ಮೆಯ ರೈತಮಹಿಳೆ.
ಚಿತ್ರದುರ್ಗ ಜಿಲ್ಲೆ ಮೊಳಕಾಲೂರು ತಾಲ್ಲೂಕಿನ ಬಿ.ಜಿ. ಕೆರೆಯವರಾದ ಸುಮಂಗಲಮ್ಮ ಓದಿದ್ದು ಪಿಯುಸಿವರೆಗೆ ಮಾತ್ರ ಆದರೆ ಸಾಧನೆ ವಿವಿ ಮಟ್ಟದ್ದು. ೮೦ ಎಕರೆ ವಿಶಾಲವಾದ ಜಾಗದಲ್ಲಿ ತಮ್ಮದೇ ‘ವಸುಂಧರ ಕೃಷಿ ಕ್ಷೇತ್ರ’ ಸ್ಥಾಪಿಸಿದ ಕೃಷಿಪಂಡಿತೆ. ತೆಂಗು ಬೆಳೆ, ಹುಣಸೆ ಮರಗಳ ಪೋಷಣೆ, ರೇಷ್ಮೆ ಬೆಳೆ, ರೇಷ್ಮೆ ಹುಳುಗಳ ಸಾಕಾಣಿಕೆ, ಅರಣ್ಯ ಬೆಳೆಗಳ ಅಭಿವೃದ್ಧಿ, ಪಶುಸಂಗೋಪನೆ, ಮೇಕೆ ಸಾಕಾಣಿಕೆ, ಎರೆಹುಳು ಗೊಬ್ಬರ ಮತ್ತು ಜೇನು ಸಾಕಾಣಿಕೆಯಲ್ಲಿ ಅನವರತ ನಿರತರು. ರಾಜ್ಯದಲ್ಲಿ ಟ್ರ್ಯಾಕ್ಟರ್ ಚಾಲನೆ ಪರವಾನಿಗೆ ಪಡೆದ ಮೊದಲ ಮಹಿಳೆ, ೬೦ ಕೃಷಿ ಕಾರ್ಮಿಕರ ಅನ್ನದಾತೆ. ನಲವತ್ತು ವರ್ಷಗಳಿಂದಲೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಸುಮಂಗಲಮ್ಮ ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಉತ್ತಮ ಸಾಧಕಿ ಮತ್ತಿತರ ಗೌರವಗಳ ಪುರಸ್ಕೃತರು.