Categories
ಕೃಷಿ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಸೂರಜಸಿಂಗ್ ಕನ್ಸಿಂಗ್ ರಜಪೂತ

ಸಾವಯವ ಕೃಷಿಯಲ್ಲಿ ಅಚ್ಚರಿಯ ಸಾಧನೆಗೈದವರು ಸೂರಜಸಿಂಗ್ ರಜಪೂತ, ಗೋ ಆಧಾರಿತ ಒಕ್ಕಲುತನದ ಮೂಲಕ ಗಮನಸೆಳೆದಿರುವ ಪ್ರಗತಿಪರ ಕೃಷಿಕ.
ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಮದಕಟ್ಟಿ ಗ್ರಾಮದ ಸೂರಜ್ ಸಿಂಗ್ ಹಿರಿಯ ಹೋರಾಟಗಾರರು. ೧೯೫೨ರ ಫೆಬ್ರವರಿ ೨ರಂದು ಕೃಷಿಕುಟುಂಬದಲ್ಲಿ ಜನನ. ಸೇನೆ ಸೇರುವ ಕನಸು ನನಸಾಗದಾಗ ಕೃಷಿಯತ್ತ ಒಲವು. ೧೯೯೭ರಲ್ಲಿ ಒಂದೂವರೆ ಎಕರೆ ಭೂಮಿಯಲ್ಲಿ ಕುಂಬಳಕಾಯಿ ಬೆಳೆದು ಪಡೆದ ಐದು ಲಕ್ಷ ರೂಪಾಯಿ ಆದಾಯದಿಂದ ಖರೀದಿಸಿದ ಆರು ಎಕರೆ ಭೂಮಿಯಲ್ಲಿ ಹಣ್ಣು ಮತ್ತು ತರಕಾರಿಯ ಭರ್ಜರಿ ಇಳುವರಿ ತೆಗೆದವರು. ಆರು ಸಾವಿರ ಗಿಡಗಳ ನೆಡುವಿಕೆ, ೩೦ ಗೋವುಗಳ ಪೋಷಣಾನಿರತ ಸೂರಜಸಿಂಗ್ರ ನಿರಂತರ ಹೊಸತನ, ಪ್ರಯೋಗಶೀಲತೆ ಬೇಸಾಯಗಾರರಿಗೆ ಸದಾ ಮಾದರಿ, ನಾಲ್ಕು ದಶಕಗಳಿಂದಲೂ ಸಾವಯವ ಕೃಷಿಯಲ್ಲೇ ತನ್ಮಯರಾಗಿರುವ ಸೂರಜಸಿಂಗ್ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಸದಸ್ಯತ್ವ ಸೇರಿ ಹಲವು ಪ್ರಶಸ್ತಿ-ಗೌರವಗಳಿಗೂ ಪಾತ್ರರು.