ವಿದ್ವಾನ್ ಎಸ್. ಶಂಕರ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸಿಸಿ ಎಲ್ಲಾ ವಾಗ್ಗೇಯಕಾರರ ಕೃತಿಗಳನ್ನು ಜನಮನಕ್ಕೆ ತಲುಪಿಸಿದವರು. ಆಕಾಶವಾಣಿ ಎ ಟಾಪ್ ಕಲಾವಿದರಾಗಿ ವಿದ್ವಾನ್ ಎಸ್. ಶಂಕರ್ ಅವರು ದೇಶ ವಿದೇಶಗಳ ಹಲವಾರು ಉತ್ಸವಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
ಕರ್ನಾಟಕ ಸಂಗೀತ ನಾಟಕ ಅಕಾಡೆಮಿಯ ಗೌರವ ಪುರಸ್ಕಾರವೂ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಗೌರವ ಪುರಸ್ಕಾರಗಳೂ ಲಭಿಸಿವೆ.