Categories
ಕೃಷಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಕೀರಣಗೆರೆ ಜಗದೀಶ್

ಕೀರಣಗೆರೆ ಜಗದೀಶ ಅವರು ರೇಷ್ಮೆ ಕೃಷಿಕರಿಗೆ ಬಹುಬಗೆಯ ಸೌಲಭ್ಯಗಳನ್ನು ಒದಗಿಸಿಕೊಡುವ ಅತ್ಯಾಧುನಿಕ ಚಾಕಿ ಸಾಕಾಣಿಕಾ ಕೇಂದ್ರವನ್ನು ಸ್ಥಾಪಿಸಿ ಅಸಂಖ್ಯಾತ ರೇಷ್ಮೆ ಬೆಳೆಗಾರರಿಗೆ ಅನುಕೂಲ ಮಾಡಿಕೊಡುತ್ತಾ ಬಂದಿದ್ದಾರೆ.

ರೇಷ್ಮೆ ಕೃಷಿ ಬೆಳೆಗಾರರಿಗೆ ಒಳ್ಳೆಯ ಆದಾಯ ಗಳಿಸಿಕೊಡುವಂತೆ ಆಧುನಿಕ ತಂತ್ರಜ್ಞಾನ ಹಾಗೂ ತರಬೇತಿಯನ್ನು ೬,೦೦೦ಕ್ಕೂ ಹೆಚ್ಚು ಮಂದಿಗೆ ತಮ್ಮ ಕೇಂದ್ರದ ಮೂಲಕ ನೀಡಿರುವ ಜಗದೀಶ್ ಅವರು ಉತ್ತಮ ಗುಣಮಟ್ಟದ ಚಾಕಿ ಹುಳುಗಳನ್ನು ರೈತರಿಗೆ ವಿತರಿಸುವ ಮೂಲಕ ಹೆಚ್ಚಿನ ಇಳುವರಿ ಹಾಗೂ ಆದಾಯ ಪಡೆಯಲು ನೆರವಾಗಿದ್ದಾರೆ. ಅತಿ ದೊಡ್ಡ ಹಾಗೂ ಅತ್ಯುತ್ತಮ ಜಾಕಿ ಕೇಂದ್ರವೆಂಬ ಹೆಗ್ಗಳಿಕೆಗೂ ಜಗದೀಶ ಅವರ ಕೀರಣಕೆರೆ ಚಾಕಿ ಕೇಂದ್ರ ಪಾತ್ರವಾಗಿದೆ.