Categories
ಪರಿಸರ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಕೆಂಪರೆಡ್ಡಿ ಅಮರನಾರಾಯಣ

ಪರಿಸರ ಸಂರಕ್ಷಣೆ-ಪೋಷಣೆಗಾಗಿ ಶ್ರಮಿಸಿದ ವಿರಳಾತಿವಿರಳ ನಿವೃತ್ತ ಐ.ಎ.ಎಸ್. ಕೆಂಪರೆಡ್ಡಿ ಅಮರನಾರಾಯಣ. ಪ್ರತಿದಿನವೂ ಪರಿಸರದಿನವಾಗಬೇಕೆಂಬ ಉದ್ವೇಷವನ್ನು ನಿಜವಾಗಿಸಿದ ಅಪ್ಪಟ ಹಸಿರು ಜಿಲ್ಲಾಧಿಕಾರಿ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಗ್ರಾಮದ ಕೆಂಪರೆಡ್ಡಿ ಅಮರನಾರಾಯಣರು ಸ್ನಾತಕೋತ್ತರ ಪದವಿ, ಎಲ್.ಎಲ್.ಬಿ. ಬಳಿಕ ಇಂಗ್ಲೆಂಡ್ನ ಲೆಸ್ಟರ್ ವಿವಿಯಲ್ಲಿ ಟಿ.ಸಿ.ಟಿ. ಫೆಲೋಶಿಪ್ ಪಡೆದು ಐ.ಎ.ಎಸ್. ಅಧಿಕಾರಿಯಾದವರು. ಬಾಲ್ಯದಿಂದಲೂ ಉತ್ಕಟ ಪರಿಸರ ಪ್ರೇಮ. ರಾಜ್ಯದ ಹಲವೆಡೆ ಜಿಲ್ಲಾಧಿಕಾರಿಯಾಗಿದ್ದಾಗ ಅಮರನಾರಾಯಣ ಅವರು ಜಾರಿಗೊಳಿಸಿದ ಪರಿಸರಪೂರಕ ಕಾರ್ಯಕ್ರಮಗಳಿಗೆ ಲೆಕ್ಕವಿಲ್ಲ. ಕೋಟಿನಾಟ, ಕೃಷಿ ಅರಣ್ಯ, ವೃಕ್ಷ ರಕ್ಷ, ಕಲ್ಲರಳಿ ಹಣ್ಣಾಗಿ, ಪರಿಮಳ ವನ, ದುರ್ಗದ ಮೊರೆ-ಹಸಿರಿಗೆ ಕೆರೆ, ಸ್ವಚ್ಛತೆಯೆ ಸ್ವರ್ಗ, ಕಸದಿಂದ ಕಾಸು, ಪ್ಲಾಸ್ಟಿಕ್ ಮುಕ್ತ ವಲಯ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ ಪರಿಸರಮಿತ್ರ ಕಲ್ಯಾಣಿಗಳ ಜೀರ್ಣೋದ್ಧಾರ, ಉದ್ಯಾನವನಗಳ ರಕ್ಷಣೆ, ೩೫ ಸಾವಿರಕ್ಕೂ ಹೆಚ್ಚು ಸಸಿ, ೧೪೦೦ಕ್ಕೂ ಅಧಿಕ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸಿದ, ನಿವೃತ್ತಿಯ ನಂತರವೂ ಪರಿಸರ ರಕ್ಷಣೆಯಲ್ಲಿ ತೊಡಗಿರುವ ಸಾಧಕರು.