Categories
ಕೃಷಿ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಡಾ. ಸಿದ್ರಾಮಪ್ಪ ಬ. ಪಾಟೀಲ

ಭೂತಾಯಿ ಮಕ್ಕಳ ಹಿತರಕ್ಷಣೆಗೆ ಬದುಕನ್ನೆ ಮೀಸಲಿಟ್ಟ ರೈತಪರ ಚಿಂತಕ ಡಾ. ಸಿದ್ರಾಮಪ್ಪ ಬ. ಪಾಟೀಲ. ಕೃಷಿ ಸಾಹಿತಿ, ಸಂಘಟನಾಕಾರರಾಗಿ ಅವರದ್ದು ಅನನ್ಯ ಸೇವೆ.
ಕಲಬುರಗಿ ತಾಲ್ಲೂಕಿನ ಶಾಂತಿನಗರದವರಾದ ಸಿದ್ರಾಮಪ್ಪ ಬಿ.ಎ., ಎಲ್ಎಲ್ಬಿ ಪದವೀಧರರು. ಆದಾಯ ತರುವ ವಕಾಲತ್ತು ತೊರೆದು ರೈತಪರ ಹೋರಾಟಕ್ಕೆ ಧುಮುಕಿದವರು. ಸಾವಯವ ಕೃಷಿಗೆ ಬೆಂಬಲ, ರೈತಪರ ಹೋರಾಟದ ಮುಂದಾಳತ್ವ, ನೊಂದ ರೈತರಲ್ಲಿ ಆತ್ಮವಿಶ್ವಾಸ ತುಂಬುವಿಕೆ, ಚಳವಳಿಗಳಿಗೆ ರೈತರ ಸಂಘಟನೆ-ರವಾನೆ, ಕೃಷಿಕರಿಗಾಗಿಯೇ ಕವನ ರಚನೆ, ಆಳಂದ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡ ಸೇವೆ. ಬಸವತತ್ವ ಪ್ರಚಾರ, ಹತ್ತಾರು ಸಂಘಟನೆಗಳಲ್ಲಿ ಸೇವೆ ಮುಂತಾದ ಬಹುಕೃತ ಸಾಮಾಜಿಕ ಕಾರ್ಯಗಳಲ್ಲಿ ಬಹುದಶಕಗಳಿಂದಲೂ ತನ್ಮಯರಾಗಿರುವ ಸಿದ್ರಾಮಪ್ಪ ರೈತರಿಗಾಗಿ ಕಾರಾಗೃಹವಾಸ ಅನುಭವಿಸಿದ ರೈತರಕ್ಷಕ. ಭಾರತ ಕೃಷಿಕ ಸಮಾಜದ ಸದಸ್ಯರಾಗಿ 30 ವರ್ಷಗಳಿಂದ ಸೇವೆಗೈಯುತ್ತಿರುವ, ಗೌರವ ಡಾಕ್ಟರೇಟ್ಗೆ ಪಾತ್ರವಾಗಿರುವ ರೈತಜೀವಿ.