ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಬಳಿ ಇರುವ ಕಾರ್ಟೊ೪ ಕಾಡಿನ ಕುಣಬಿ ಜನಾಂಗದ ಶ್ರೀ ಮಹಾದೇವ ವೇಳಪ ಕುಣಬಿಗಳ ನಡೆದಾಡುವ ವಿಶ್ವಕೋಶ ಎಂದೇ ಹೆಸರಾದವರು. ಮಹಾದೇವ ವೇಳಪ ಅವರು ಸುಮಾರು ೩೮ ಜಾತಿಯ ಗೆಡ್ಡೆಗಳನ್ನು ಗುರುತಿಸಬಲ್ಲರು. ಕಾಡಿನ ಪ್ರಾಣಿ ಪಕ್ಷಿಗಳ ಬಗ್ಗೆ ಅವರಿಗೆ ಅಪಾರವಾದ ಜ್ಞಾನವಿದೆ.
೯೧ ವರ್ಷದ ಮಹಾದೇವ ವೇಳಿಪರವರ ಪರಿಸರ ಪ್ರೀತಿ ದೊಡ್ಡದು. ಕಲ್ಲಿಗೆ ಕಲ್ಲು ಕುಟ್ಟಿ, ಕಲ್ಲು ಮತ್ತು ಮಾಡಿ ಮರದ ತೊಗಟೆಯ ಸಹಾಯದಿಂದ ಬೆಂಕಿ ಹೊತ್ತಿಸಿ ಉಪಯೋಗಿಸುವುದರ ಮೂಲಕ ಬೆಂಕಿ ಕಡ್ಡಿ ಬಳಸದೇ ಪರಿಸರ ಕಾಪಾಡುತ್ತಿದ್ದಾರೆ. ಇವರು ಉತ್ತಮ ಮನೆ ಮದ್ದು ಕೊಡುವುದರಲ್ಲಿ ಕೂಡ ಪರಿಣಿತರು. ತುಳಸಿ ಪದ, ರಾಮಾಯಣ ಮಹಾಭಾರತಕ್ಕೆ ಸಂಬಂಧಿಸಿದ್ದ ಅನೇಕ ಹಾಡುಗಳನ್ನು ಹಾಗೂ ಕುಣಬಿಗಳ ಶ್ರಮ ಸಂಸ್ಕೃತಿಯನ್ನು ಬಿಂಬಿಸುವಂಥ ಹಾಡುಗಳನ್ನು ಇವರು ಹಾಡುತ್ತಾರೆ. ಒಂದಕ್ಷರ ಕಲಿಯದಿದ್ದರೂ ದಟ್ಟ ಕಾನನದ ಕಾರ್ಟೊಆ ಊರಿಗೆ ಕನ್ನಡ ಶಾಲೆ ತರುವಲ್ಲಿ ಇವರ ಶ್ರಮವೂ ಇದೆ.