Categories
ಕೃಷಿ ಪರಿಸರ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಸಿ.ಯತಿರಾಜು

ವಿಜ್ಞಾನ ಹಾಗೂ ಪರಿಸರ ಜಾಗೃತಿಗಾಗಿ ಮೂರು ದಶಕಗಳಿಂದ ತೊಡಗಿಕೊಂಡಿರುವ ಸಿ.ಯತಿರಾಜು ಅವರು ವೃತ್ತಿಯಿಂದ ಪ್ರಾಧ್ಯಾಪಕರು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಯತಿರಾಜು ಅವರು ಭಾರತ ಜ್ಞಾನ ವಿಜ್ಞಾನ ಸಮಿತಿಯ ಚಟುವಟಿಕೆಗಳಲ್ಲಿ ಪಾಲುಗೊಂಡವರು.

ಕರ್ನಾಟಕ ರಾಜ್ಯ ಜನಪ್ರಿಯ ವಿಜ್ಞಾನ ಸಾಹಿತಿಗಳ ವೇದಿಕೆಯ ಸಂಚಾಲಕರಾಗಿದ್ದ ಯತಿರಾಜು ಅವರು ವಿಜ್ಞಾನಕ್ಕೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಪಶ್ಚಿಮಘಟ್ಟಗಳ ಕರೆ, ಕಾಯದ ಕೃಷಿ, ಹಿರೋಷಿಮಾದಿಂದ ಬುದ್ಧನ ನಗುವಿನವರೆಗೆ ಕೃತಿಗಳು ಮುಖ್ಯವಾದವು.

ವಿಜ್ಞಾನ ಸಂವಹನಕಾರರಾಗಿ ಉಪನ್ಯಾಸ, ಲೇಖನ ಬರೆಯುವುದರಲ್ಲಿಯೂ ನಿಪುಣರಾದ ಯತಿರಾಜು ಅವರು ಸಾಕ್ಷರತಾ ಅಂದೋಲನಗಳಲ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ.