Categories
ಯೋಗ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಡಾ. ಎ.ಎಸ್. ಚಂದ್ರಶೇಖರ

ಆಯುರ್ವೇದ ಚಿಕಿತ್ಸೆ ಹಾಗೂ ಯೋಗ ಕ್ಷೇತ್ರದ ಅನನ್ಯ ಸಾಧಕರು ಡಾ. ಎ.ಎಸ್. ಚಂದ್ರಶೇಖರ. ಯೋಗ ಕೇಂದ್ರಗಳ ಸ್ಥಾಪಕರು, ಸಮಾಜಮುಖಿ ಸಹ.
ಮೈಸೂರಿನವರಾದ ಎ.ಎಸ್. ಚಂದ್ರಶೇಖರ ವೃತ್ತಿಯಲ್ಲಿ ಆಯುರ್ವೇದ ವೈದ್ಯರು, ಪ್ರವೃತ್ತಿಯಲ್ಲಿ ಯೋಗ ಶಿಕ್ಷಕರು, ಸಮಾಜಸೇವೆ, ನೈಸರ್ಗಿಕ ಚಿಕಿತ್ಸೆಯಲ್ಲಿ ಹೆಸರುವಾಸಿ. ಹತ್ತು ಯೋಗ ಕೇಂದ್ರಗಳ ಸ್ಥಾಪಕರು. ೩೬ ವರ್ಷಗಳಿಂದಲೂ ಯೋಗ ಮತ್ತು ಆಯುರ್ವೇದ ಚಿಕಿತ್ಸಾ ನಿರತರು. ಸಾವಿರಾರು ಜನರಿಗೆ ಯೋಗ ತರಬೇತಿ ನೀಡಿದ ಹೆಗ್ಗಳಿಕೆ. ಬಡವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಉಚಿತ ಪುಸ್ತಕ ವಿತರಣೆ, ಅಸ್ತಮಾ ರೋಗಿಗಳಿಗೆ ಉಚಿತ ಔಷಧಿ, ಹಳ್ಳಿಗಳಲ್ಲಿ ೩೦ ವರ್ಷಗಳಿಂದಲೂ ಪ್ರತಿ ಹದಿನೈದು ದಿನಕ್ಕೊಮ್ಮೆ ಆರೋಗ್ಯ ತಪಾಸಣಾ ಶಿಬಿರಗಳ ಆಯೋಜನೆ, ತಲಕಾಡು ಪಂಚಲಿಂಗ ದರ್ಶನದ ವೇಳೆ ಒಂದು ಲಕ್ಷ ಜನರಿಗೆ ಉಚಿತ ಊಟದ ವ್ಯವಸ್ಥೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲೂ ನಿರತರಾಗಿರುವ ಸೇವಾಸಿಂಧು. ೨೭ ಸಂಘ-ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಗುರುತರ ಸೇವೆ. ಯೋಗಾರ್ಥ ಸಂಗ್ರಹ, ಎ ಹ್ಯಾಂಡ್ ಬುಕ್ ಆಫ್ ಯೋಗ, ನೇಚರ್ ಕೇರ್ ಮತ್ತಿತರ ಕೃತಿಗಳ ರಚನಾಕಾರರು. ಹಲವು ಪ್ರಶಸ್ತಿ-ಗೌರವ-ಸನ್ಮಾನಗಳಿಗೆ ಸತ್ಪಾತ್ರರು.