Categories
ಕಾನೂನು ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ಕೆ.ಎನ್. ಭಟ್

ಕರ್ನಾಟಕ ಕಂಡ ಅಪ್ರತಿಮ ಪ್ರತಿಭಾವಂತ ನ್ಯಾಯವಾದಿ ಕೆ.ಎನ್. ಭಟ್, ಹೈಕೋರ್ಟ್-ಸುಪ್ರೀಂಕೋರ್ಟ್ ನ್ಯಾಯವಾದಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನ್ಯಾಯದಾನ ವ್ಯವಸ್ಥೆಗೆ ಅಪೂರ್ವ ಕಾಣಿಕೆ ನೀಡಿದ ನ್ಯಾಯಚಿಂತಕರು.
ಕಾಸರಗೋಡು ಜಿಲ್ಲೆಯ ಪೆರ್ಲ ಗ್ರಾಮದಲ್ಲಿ ೧೯೪೦ರಲ್ಲಿ ಜನಿಸಿದ ಕೆ.ಎನ್. ಭಟ್ ೧೯೬೨ರಲ್ಲಿ ಕಾನೂನು ಪದವಿ ಪಡೆದವರು. ಬೆಂಗಳೂರಿನಲ್ಲಿ ವೃತ್ತಿ ಬದುಕಿನಾರಂಭ. ೧೯೮೬ರಲ್ಲಿ ಸುಪ್ರೀಂಕೋರ್ಟ್ನ ಹಿರಿಯ ವಕೀಲರಾಗಿ ಪದೋನ್ನತಿ ಪಡೆದವರು. ೧೯೯೬ರಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ ಕೆ.ಎನ್. ಭಟ್ ಅವರದ್ದು ಅಯೋಧ್ಯೆ ಪ್ರಕರಣದಲ್ಲಿ ಗುರುತರ ನಿರ್ವಹಣೆ, ಅಲಹಾಬಾದ್ ಹೈಕೋರ್ಟ್ನಲ್ಲಿ ಭಗವಾನ್ ಶ್ರೀರಾಮನನ್ನು ಕಕ್ಷಿದಾರರನ್ನಾಗಿ ಮಾಡಿ ವಾದ ಮಂಡಿಸಿದ ಹಿರಿಮೆ. ಅಯೋಧ್ಯೆಯಲ್ಲಿ ಶ್ರೀರಾಮ ಜನಿಸಿದ್ದಕ್ಕೆ ಕೆ.ಎನ್. ಭಟ್ ಅವರು ಒದಗಿಸಿದ ಪೂರಕ ದಾಖಲೆಗಳೇ ಮುಂದೆ ಸುಪ್ರೀಂಕೋರ್ಟ್ನಲ್ಲಿ ತೀರ್ಪು ಬರಲು ಕಾರಣೀಭೂತವಾಗಿದ್ದು ವಿಶೇಷ. ಅತಿಥಿ ಪ್ರಾಧ್ಯಾಪಕ, ಕಾನೂನು ಬರಹಗಳ ಅಂಕಣಕಾರರಾಗಿಯೂ ಸುಪ್ರಸಿದ್ಧರು.