Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಕೆ. ಲಿಂಗಪ್ಪ ಶೇರಿಗಾರ ಕಟೀಲು

ದಕ್ಷಿಣ ಕನ್ನಡ ಜಿಲ್ಲೆಯ ವಿಶಿಷ್ಟ ಪ್ರತಿಭೆ ಕೆ. ಲಿಂಗಪ್ಪ ಶೇರಿಗಾರ. ನಾಡು ಕಂಡ ಶ್ರೇಷ್ಠ ನಾಗಸ್ವರ ವಾದಕರು, ಪಕ್ಕವಾದ್ಯ ಪ್ರವೀಣರು. ಹೆಮ್ಮೆಯ ಸಾಧಕರು ಕೂಡ.
ಲಿಂಗಪ್ಪ ಶೇರಿಗಾರ ತಂದೆ ವಾಸು ಶೇರಿಗಾರ ಸುಪ್ರಸಿದ್ಧ ನಾಗಸ್ವರ ವಾದಕರು, ಬಾಲ್ಯದಲ್ಲೇ ಸ್ವರಾಭ್ಯಾಸ, ತಂದೆಯೇ ಮೊದಲ ಗುರು, ವಿದ್ವಾನ್ ಕೃಷ್ಣಭಟ್ರಿಂದ ಕೊಳಲು ವಾದನ, ಮಧುರೈನ ಎಂ.ಪಿ.ಆರ್. ಅಯ್ಯಾ ಸ್ವಾಮಿ ಅವರಿಂದ ನಾಗಸ್ವರ ಕಲಾದೀಕ್ಷೆ, ಒಲಿದ ನಾದವೇ ಬದುಕು. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಕಲಾಜೀವನದ ಆರಂಭ, ನಲವತ್ತು ವರ್ಷಗಳಿಂದಲೂ ದೇವಳದಲ್ಲಿ ಸ್ವರಸೇವೆ. ವಾರ್ಷಿಕ ಉತ್ಸವ, ನವರಾತ್ರಿ ಮೊದಲಾದ ವಿಶೇಷ ಸಂದರ್ಭಗಳಲ್ಲಿ ನಾಗಸ್ವರ ಕಛೇರಿ ಮೂಲಕ ದೇವಿಕೃಪೆಗೆ ಪಾತ್ರರು. ಕೊಲ್ಲೂರು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಸೇರಿ ಪ್ರಮುಖ ದೇವಾಲಯಗಳಲ್ಲೂ ಕಛೇರಿ ನಡೆಸಿಕೊಟ್ಟ ಹಿರಿಮೆ. ಶ್ರೀಕೃಷ್ಣಾನುಗ್ರಹ ಪ್ರಶಸ್ತಿ, ನಾಗಸ್ವರ ವಿಶಾರದ ಮುಂತಾದ ಪ್ರಶಸ್ತಿಗಳಿಗೆ ಪಾತ್ರರು.