Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಗಿರಿಜಾ ನಾರಾಯಣ

ಸುಗಮ ಸಂಗೀತ ಕ್ಷೇತ್ರದ ಅನನ್ಯ ಸಾಧಕಿ ಗಿರಿಜಾ ನಾರಾಯಣ. ಸಂಗೀತಕ್ಕೇ ಬದುಕು ಮೀಸಲಿಟ್ಟ ಗಾಯಕಿ, ಸ್ವರಸಂಯೋಜಕಿ, ಸಂಘಟಕಿ ಹಾಗೂ ಸಮಾಜಸೇವಕಿ,
ಸಾಂಸ್ಕೃತಿಕ ನಗರಿ ಮೈಸೂರಿನವರಾದ ಗಿರಿಜಾ ನಾರಾಯಣ ಅವರದ್ದು ಸಂಗೀತದ ಕುಟುಂಬ. ಅಪ್ಪ-ಅಮ್ಮ ಇಬ್ಬರೂ ಸಂಗೀತಜ್ಞರೇ. ಸಹಜವಾಗಿ ಬಾಲ್ಯದಲ್ಲೇ ಸ್ವರಾಭ್ಯಾಸ, ವಿದ್ವಾನ್ ಗುರುರಾಜಾಚಾರ್, ವೆಂಕಟರಾಂ, ಎಸ್. ಸೋಮಸುಂದರಂ, ಪಾರ್ವತಿಸುತ, ಶ್ಯಾಮಲಾ ಜಿ. ಭಾವೆ ಮುಂತಾದವರಿಗೆ ಸಂಗೀತಪಾಠದ ಯೋಗ. ೧೯೮೩ರಲ್ಲೇ ಆಕಾಶವಾಣಿ ‘ಬಿ ಹೈ’ ಗ್ರೇಡ್ ಕಲಾವಿದೆ. ಸುಗಮಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ. ಕವಿಕಾವ್ಯಕ್ಕೆ ಸ್ವರಧಾರೆ. ಜನಪದ, ದೇವರನಾಮ, ವಚನಗಳ ಗಾಯನದಲ್ಲೂ ಸುಪ್ರಸಿದ್ಧಿ. ೧೦೦೦ಕ್ಕೂ ಹೆಚ್ಚು ವೇದಿಕೆಗಳಲ್ಲಿ ಗಾನಸುಧೆ. ‘ಸ್ವರ’ ಸಂಸ್ಥೆ ಮುಖೇನ ನೂರಾರು ಶಿಷ್ಯರ ರೂಪಿಸಿದ ಗುರು. ‘ಸ್ವರಾಲಯ’ ಸಂಸ್ಥೆ ಸ್ಥಾಪಿಸಿ ೨೦೦ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ೨೦೦ ಗೀತೆಗಳಿಗೆ ಸ್ವರಸಂಯೋಜನೆ. ದೇಶಾದ್ಯಂತ ಸಂಗೀತ ಕಾರ್ಯಕ್ರಮ, ನೊಂದವರಿಗೆ ನೆರವಾದ ಸಮಾಜಸೇವಕಿ. ಕೆಂಪೇಗೌಡ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿಯ ಗೌರವಗಳಿಂದ ಸಂಪನ್ನವಾದ ಕಲಾಬದುಕು.