Categories
ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಜಯಾ ಸುವರ್ಣ

ಜಯಾ ಸುವರ್ಣ ಅವರು ಮುಂಬಯಿಯಲ್ಲಿ ನೆಲೆನಿಂತು ಹೋಟೆಲ್ ಉದ್ಯಮಿಯಾಗಿ ವಲಸೆ ಬರುವ ಕರಾವಳಿಯ ಕನ್ನಡಿಗರಿಗೆ ಆಶ್ರಯದಾತರಾಗಿದ್ದಾರೆ. ಅತ್ಯುತ್ತಮ ಸಂಘಟನಕಾರರೂ ಆದ ಜಯಾ ಸುವರ್ಣ ರಾಷ್ಟ್ರೀಯ ಬಿಲ್ಲವ ಮಹಾಮಂಡಲವನ್ನು ರೂಪಿಸಿ ಎಲ್ಲ ಬಿಲ್ಲವರನ್ನೂ ಒಗ್ಗೂಡಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಸಹಕಾರಿ ಕ್ಷೇತ್ರದಲ್ಲಿಯೂ ತಮ್ಮ ಪ್ರಾವೀಣ್ಯತೆ ತೋರಿರುವ ಜಯಾ ಸುವರ್ಣ ಅವರು ಭಾರತ್ ಕೋ-ಆಪರೇಟಿವ್‌ ಬ್ಯಾಂಕಿನ ಅಧ್ಯಕ್ಷರಾಗಿ ಬ್ಯಾಂಕನ್ನು ರೂ.೬.೩೨ಲಕ್ಷಗಳ ಬಂಡವಾಳದಿಂದ ೧೦೫ ಕೋಟಿ ರೂಗಳ ಲಾಭ ಗಳಿಸುವ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸಂಘಟನಾ ಚತುರತೆಯನ್ನು ತೋರಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ.