Categories
ರಂಗಭೂಮಿ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ರಾಮೇಶ್ವಲ ವರ್ಮ ರಂಗಭೂಮಿ (ಹವ್ಯಾಸಿ)

ಸಮತೆಂತೋ, ಸಮುದಾಯ, ಕಲಾಪ್ರಿಯ ತಂಡಗಳೊಂದಿಗೆ ಹಲವಾರು ನಾಟಕಗಳಲ್ಲಿ ನಟನೆ ಮತ್ತು ನಿರ್ದೇಶನ ಮಾಡಿರುವ ರಾಮೇಶ್ವರಿ ವರ್ಮಾ ಅವರು ಬಿ.ವಿ.ಕಾರಂತ, ನ.ರತ್ನ, ಪ್ರಸನ್ನ, ಸತ್ಯು ಅವರಂತಹ ನುರಿತ ನಿರ್ದೇಶಕರ ಗರಡಿಯಲ್ಲಿ ಪಳಗಿದವರು. ಕಿನಾರ ಎಂಬ ಕಿರಿಯರ ರಂಗನಾಟಕವನ್ನು ಹುಟ್ಟುಹಾಕಿದ ಹಿರಿಮೆ ಇವರದು. ಹಲವು ನಾಟಕಗಳಿಗೆ ನೇಪಥ್ಯ, ವಸ್ತ್ರವಿನ್ಯಾಸ, ರಂಗಸಜ್ಜಿಕೆಗಳನ್ನು ನಿರ್ವಹಿಸಿರುವ ರಾಮೇಶ್ವರಿ ವರ್ಮಾ ಮೈಸೂರು ವಿವಿಯಲ್ಲಿ ಅಧ್ಯಾಪಕರಾಗಿದ್ದರು. ತುಘಲಕ್, ಸಾಯೋ ಆಟ, ಹುಚ್ಚುಕುದುರೆ, ತಾಯಿ ಮುಂತಾದ ನಾಟಕಗಳಲ್ಲಿ ಇವರ ಅಭಿನಯ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದ್ದು, ಇವರ ಸೇವೆಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳು ಲಭಿಸಿವೆ.