Categories
ಚಿತ್ರಕಲೆ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ಜಿ.ಎಲ್.ಎನ್.ಸಿಂಹ

ಮೈಸೂರಿನ ಕಾವಾ ಚಿತ್ರಕಲಾ ಶಾಲೆಯಲ್ಲಿ ಕಲಿತ ಜಿ.ಎಲ್.ಎನ್.ಸಿಂಹ ಅವರು ಭಾರತೀಯ ಪೌರಾಣಿಕ ಕಥಾಪ್ರಸಂಗಗಳನ್ನು ಹಾಗೂ ವೇದ ಸೂಕ್ತಗಳನ್ನು ಅನುಸರಿಸಿ ಹಲವಾರು ಸುಂದರ ಮತ್ತು ಅರ್ಥಪೂರ್ಣ ಚಿತ್ರಗಳನ್ನು ರಚಿಸಿದ್ದಾರೆ.

ಭಾರತೀಯ ಕಲಾಲೋಕದಲ್ಲಿ ಧಾರ್ಮಿಕ ಹಿನ್ನೆಲೆಯ ಸರಣಿ ಚಿತ್ರಗಳನ್ನು ನೀಡಿರುವ ಸಿಂಹ ಅವರು ಸ್ತೋತ್ರಗಳನ್ನು ಅನುಕರಿಸಿ ಚಿತ್ರಗಳನ್ನು ರಚಿಸುವ ಪ್ರಯತ್ನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಭಾರತೀಯ ಮಹಾಕಾವ್ಯಗಳ ಆಂತರ್ಯವನ್ನು ಕುಂಚದಲ್ಲಿ ಸಮರ್ಥವಾಗಿ ಬಿಂಬಿಸುವ ಕಲಾವಿದರಲ್ಲಿ ಜಿ.ಎಲ್.ಎನ್.ಸಿಂಹ ಅವರು ಅಪೂರ್ವ ಸಾಧನೆಗೈದಿದ್ದಾರೆ.