Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ಬಿ.ವಿ. ಶ್ರೀನಿವಾಸ್

ಸುಗಮ ಸಂಗೀತ ಕ್ಷೇತ್ರದಲ್ಲಿ ಸ್ವರಸಂಯೋಜಕ ಬಿ.ವಿ. ಶ್ರೀನಿವಾಸ್ ಅವರದ್ದು ಅಚ್ಚಳಿಯದ ಹೆಸರು, ನಾಲ್ಕು ದಶಕಕ್ಕೂ ಮೀರಿ ಸಂಗೀತ ಸೇವಾನಿರತ ಸಾಧಕರು.
ಹಾರ್ಮೋನಿಯಂ ವಿದ್ವಾನ್ ವೆಂಕಟೇಶಮೂರ್ತಿ ಹಾಗೂ ಚೆಲುವರಂಗಮ್ಮರ ಸುಪುತ್ರರಾದ ಬಿ.ವಿ. ಶ್ರೀನಿವಾಸ್ ಬಾಲ್ಯದಲ್ಲೇ ಸಂಗೀತಾಸಕ್ತರು, ಭಜನೆಮನೆಯೇ ಸ್ವರಪ್ರೇಮ ಪಲ್ಲವಿಸಿದ ಮಂದಿರ. ತಂದೆಯಿಂದ ಹಾರ್ಮೋನಿಯಂ ಪಾಠ. ಚೆಲುವೀರಯ್ಯ ಹಾಗೂ ವಿದ್ವಾಂಸರಾದ ಬಾಲಕೃಷ್ಣಪ್ಪರಿಂದ ಕರ್ನಾಟಕ ಸಂಗೀತದಲ್ಲಿ ವಯಲಿನ್ ಅಭ್ಯಾಸ, ಪಂಡಿತ್ ಆರ್.ವಿ. ಶೇಷಾದ್ರಿ ಗವಾಯಿಯವರಿಂದ ಸಿತಾರ್ ವಾದನ ಕಲಿಕೆ. ಕವಿಗೀತೆಗಳಿಗೆ ರಾಗ ಸಂಯೋಜಿಸುವ ಮೂಲಕ ಸುಗಮ ಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ. ೪೨ ವರ್ಷಗಳಿಂದ ಅಹರ್ನಿಶಿ ಸೇವೆ. ೨೦೦೦ಕ್ಕೂ ಅಧಿಕ ಗೀತೆಗಳಿಗೆ ಸಂಗೀತ ನಿರ್ದೇಶನ, ಅಪರಂಜಿ ಹಾಗೂ ಭಾಗ್ಯದ ಬೆಳೆಗಾರ ಜನಪ್ರಿಯ ಧ್ವನಿಸುರುಳಿಗಳು. ನಾಡಿನ ಬಹುತೇಕ ಗಾಯಕರೆಲ್ಲರಿಗೂ ಹಾರ್ಮೋನಿಯಂ-ಕೀಬೋರ್ಡ್ ಸಹಕಾರ, ಅಮೆರಿಕಾ, ಯೂರೋಪ್ ದೇಶಗಳಲ್ಲೂ ಪಕ್ಕವಾದ್ಯ ಸೇವೆ. ಕರ್ನಾಟಕ ಕಲಾಶ್ರೀ ಸೇರಿದಂತೆ ನಾಡಿನ ಹಲವಾರು ಪ್ರತಿಷ್ಠಿತ ಸಂಸ್ಥೆಗಳಿಂದ ಗೌರವಿಸಲ್ಪಟ್ಟ ಹಿರಿಮೆ.