Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಶಿಕ್ಷಣ

ಡಾ. ಬಿಷ್ಟಪ್ಪ ಫಕೀರಪ್ಪ ದಂಡಿನ

ಸಾವಿರಾರು ಬಡಮಕ್ಕಳ ಬಾಳಿನಲ್ಲಿ ಅಕ್ಷರದ ಜ್ಯೋತಿ ಬೆಳಗಿದ ಶಿಕ್ಷಣ ಚೇತನ ಡಾ. ಬಿ.ಎಫ್. ದಂಡಿನ. ೬೦ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ಹಳ್ಳಿಮಕ್ಕಳ ಹಿತಚಿಂತಕ.
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ದ್ಯಾಮಣಸಿಯಲ್ಲಿ ಜನಿಸಿದ ದಂಡಿನ ಕಡುಬಡತನದಲ್ಲಿ ಅರಳಿದ ಪ್ರತಿಭೆ. ಕೂಲಿ ಮಾಡುತ್ತಲೇ ವ್ಯಾಸಂಗ. ಬಿ.ಎಸ್ಸಿ. ಪದವಿ, ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಾಧ್ಯಾಪಕರಾಗಿ ಒಂದೂವರೆ ದಶಕಗಳ ಕಾಲ ಸೇವೆ. ಪ್ರಾಚಾರ್ಯರಾಗಿಯೂ ದುಡಿತ. ಉದ್ಯೋಗಕ್ಕೆ ರಾಜೀನಾಮೆಯಿತ್ತು ಬಡಮಕ್ಕಳ ಶಿಕ್ಷಣಕ್ಕಾಗಿ ಜೀವನ ಅರ್ಪಣೆ, ಕನಕದಾಸ ಶಿಕ್ಷಣ ಸಂಸ್ಥೆ ಮೂಲಕ ಬಡ, ಹಿಂದುಳಿದ ಗ್ರಾಮೀಣ ಮಕ್ಕಳಿಗಾಗಿ ವಸತಿನಿಲಯ ಸ್ಥಾಪಿಸಿ ಉಚಿತ ಶಿಕ್ಷಣ, ಕಲಾ, ವಾಣಿಜ್ಯ ಮತ್ತು ವಿಜ್ಞಾನ ಶಿಕ್ಷಣ ಒದಗಿಸುವ ಹೈಸ್ಕೂಲ್, ಪದವಿಪೂರ್ವ ಕಾಲೇಜು, ಪದವಿ, ಬಿ.ಎಡ್, ಡಿ.ಎಡ್ ಹಾಗೂ ಸ್ನಾತಕೋತ್ತರ ಸಂಸ್ಥೆ ಸೇರಿದಂತೆ ಒಟ್ಟು ೬೦ ಶಿಕ್ಷಣ ಸಂಸ್ಥೆಗಳನ್ನು ನಡೆಸಿದ ಹೆಗ್ಗಳಿಕೆ. ಸಾವಿರಾರು ಬಡ ವಿದ್ಯಾರ್ಥಿಗಳ ಬದುಕು ರೂಪಿಸಿದ ಧನ್ಯತೆ. ೮೬ರ ಇಳಿ ವಯಸಿನಲ್ಲೂ ಕ್ರಿಯಾಶೀಲವಾಗಿರುವ ಅಕ್ಷರದಾಸೋಹಿ, ಶಿಕ್ಷಣ ಪ್ರದೀಪ, ಅತ್ಯುತ್ತಮ ಸಮಾಜ ಸೇವಕ ಮುಂತಾದ ಪ್ರಶಸ್ತಿಗಳಿಗೆ ಪಾತ್ರವಾಗಿರುವ ವಿರಳಾತಿವಿರಳ ಶಿಕ್ಷಣ ಶಿಲ್ಪಿ,