Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಬಿ.ಎಸ್. ಶ್ರೀನಾಥ್

ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ವಿಶೇಷ ಸಾಧನೆ ಮತ್ತು ಸೇವೆಗೈದವರು ಡಾ|| ಬಿ.ಎಸ್. ಶ್ರೀನಾಥ್. ನಾಡಿನ ಅತ್ಯುತ್ತಮ ಶಸ್ತ್ರಚಿಕಿತ್ಸಕ, ದಕ್ಷ ಆಡಳಿತಗಾರ, ಕ್ಯಾನ್ಸರ್ ಪೀಡಿತರ ದಯಾಬಂಧು.
ವೈದ್ಯಲೋಕಕ್ಕೆ ಮಲೆನಾಡಿನ ಕೊಡುಗೆ ಡಾ|| ಬಿ.ಎಸ್. ಶ್ರೀನಾಥ್, ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ೧೯೫೦ರಲ್ಲಿ ಜನಿಸಿದ ಶ್ರೀನಾಥ್ ಬಾಲ್ಯದಲ್ಲೇ ವೈದ್ಯರಾಗುವ ಕನಸು ಕಂಡವರು. ಮೈಸೂರಲ್ಲಿ ಎಂ.ಬಿ.ಬಿ.ಎಸ್, ಚಂಡೀಗಢದಲ್ಲಿ ಸ್ನಾತಕೋತ್ತರ ಪದವಿ, ಇಂಗ್ಲೆಂಡ್ನಲ್ಲಿ ವಿಶೇಷ ತರಬೇತಿ ಪಡೆದ ಪ್ರತಿಭಾವಂತ ವೈದ್ಯ ವಿದ್ಯಾರ್ಥಿ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಿಶೇಷ ಪರಿಣಿತಿ, ಪುದುಚೇರಿ, ಚಂಡೀಗಢ, ಕೇರಳ, ಇಂಗ್ಲೆಂಡ್, ಬೆಂಗಳೂರಿನ ಕಿದ್ವಾಯಿ, ಬೆಂಗಳೂರು ಕ್ಯಾನ್ಸರ್ ಸಂಸ್ಥೆ, ಎಚ್ಸಿಜಿ, ರಂಗದೊರೈ ಹಾಗೂ ಶಂಕರ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರಾಗಿ ಮಹತ್ವದ ಸೇವೆ. ಕ್ಯಾನ್ಸರ್ ರೋಗಿಗಳಿಗೆ ಹೊಸ ಬದುಕು ಕೊಟ್ಟ ಧನ್ವಂತರಿ, ಸದ್ಯ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ, ಹತ್ತಾರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಡಾ. ಶ್ರೀನಾಥ್ ರಾಜ್ಯದ ಹೆಮ್ಮೆಯ ವೈದ್ಯರಲ್ಲೊಬ್ಬರು.