Categories
ರಾಜ್ಯೋತ್ಸವ 2022 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಾ. ರಾಮಕೃಷ್ಣ ಮರಾಠೆ

ಕನ್ನಡ ವೃತ್ತಿ ರಂಗಭೂಮಿಯ ಆಳ ಅಧ್ಯಯನಕಾರರಲ್ಲಿ ಡಾ. ರಾಮಕೃಷ್ಣ ಮರಾಠೆ ಪ್ರಮುಖರು, ನಟ, ನಾಟಕಕಾರ, ಅನುವಾದಕ, ತೌಲನಿಕ ಅಧ್ಯಯನಕಾರ, ಕನ್ನಡ ಉಪನ್ಯಾಸಕ ಮತ್ತು ಪತ್ರಕರ್ತರಾಗಿ ಸೇವೆಗೈದ ಬಹುರೂಪಿ, ಬಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ದೇವಣಗಾಂವ್‌ನಲ್ಲಿ ೧೯೫೮ರಲ್ಲಿ ಜನಿಸಿದ ಡಾ. ರಾಮಕೃಷ್ಣ ಮರಾಠೆ ವೃತ್ತಿಯಲ್ಲಿ ಉಪನ್ಯಾಸಕ, ಪ್ರವೃತ್ತಿಯಲ್ಲಿ ಬಹುರೂಪಿ, ರಂಗನಟನೆ, ನಾಟಕರಚನೆ ಮತ್ತು ಸಾಹಿತ್ಯ ಕೃಷಿ ಪ್ರಧಾನ ಆಸಕ್ತಿಯ ಕ್ಷೇತ್ರಗಳು, ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಮಾರ್ಗದರ್ಶನದಲ್ಲಿ *ಉತ್ತರಕರ್ನಾಟಕದ ವೃತ್ತಿರಂಗಭೂಮಿ ಕುರಿತು ಪಿಎಚ್‌ಡಿ ಮಾಡಿದವರು. ಕರ್ನಾಟಕ ವೃತ್ತಿರಂಗ ಕಂಪನಿಗಳ ನಿಖರ ಮಾಹಿತಿಯುಳ್ಳವರು. ಅಪರೂಪದ ಕಾವ್ಯ ಸಂಪಾದಿಸಿದವರು. ಕೊಣ್ಣೂರ ನಾಟಕ ಕಂಪನಿ, ಬಿ.ಆರ್.ಅಲಶಿನಗೋಜ ಜೀವನಚಲಿತ್ರೆ, ರಂಗಭೂಮಿಯ ಕನ್ನಡ ಸಂವೇದನೆ, ನಾಟಕ-ಕರ್ನಾಟಕ ಕೃತಿ ಮತ್ತು ರಾಮಧಾನ್ಯ ನಾಟಕದ ರಚನಾಕಾರರು. ಗ್ರಂಥ ಸಂಪಾದಕರು, ಅಂಗಾಯತ ಪತ್ತಿಕೆಯ ಸಹಸಂಪಾದಕರು. ಕನ್ನಡದಿಂದ ಮರಾಠಿ-ಮರಾಠಿಯಿಂದ ಕನ್ನಡಕ್ಕೆ ಹಲವು ಕೃತಿಗಳನ್ನು ತಂದ ಅನುವಾದಕರು. ಮಾಧ್ಯಮಗಳಲ್ಲಿ ಲೇಖನ ಬರೆದವರು, ಅನೇಕ ಏಚಾರಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿ ವಿದ್ವತ್ ದರ್ಶಿಸಿದವರು. ಹಲವು ಪ್ರಶಸ್ತಿಗಳಿಗೆ ಪಾತ್ರರಾದ ರಾಮಕೃಷ್ಣ ಮರಾಠ ಸಾಹಿತ್ಯ-ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸೇವಾನಿರತರಾಗಿರುವ ಕ್ರಿಯಾಶೀಲರು.