Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ|| ಹೆಚ್.ಎಂ. ವೆಂಕಟಪ್ಪ

ಗ್ರಾಮೀಣ ಜನರ ಆರೋಗ್ಯ ರಕ್ಷಣೆಯಲ್ಲಿ ಸಾರ್ಥಕತೆ ಕಂಡವರು ಡಾ|| ಹೆಚ್.ಎಂ. ವೆಂಕಟಪ್ಪ. ನಿಸ್ಪೃಹ ಸೇವೆ, ದಕ್ಷ ಆಡಳಿತ, ಅತ್ಯುತ್ತಮ ಪರಿಚಾರಿಕೆಗೆ ಹೆಸರಾದ ವೈದ್ಯಶಿರೋಮಣಿ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಗ್ರಾಮದ ರೈತಾಪಿ ಕುಟುಂಬದವರಾದ ವೆಂಕಟಪ್ಪ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ಪದವಿ, ಬಿ.ಎಂ.ಸಿ.ಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರ್ಕಾರಿ ಸೇವೆ ಆರಂಭ, ಸತತ ೨೪ ವರ್ಷಗಳ ಕಾಲ ಹಳ್ಳಿಗರ ಜೀವರಕ್ಷಕರಾಗಿ ಸಾರ್ಥಕ ಸೇವೆ. ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಿದ ವೈದ್ಯಾಧಿಕಾರಿ, ಬೆಂಗಳೂರಿನ ಕುಷ್ಟರೋಗಿಗಳ ಆಸ್ಪತ್ರೆಯಲ್ಲೂ ಮಾನವೀಯ ಸೇವೆ. ೧೯೯೪ರಲ್ಲಿ ಸ್ವಯಂ ನಿವೃತ್ತಿ, ಬೆಂಗಳೂರಿನ ಎರಡು ಕಡೆ ಅತ್ಯಾಧುನಿಕ ಉಪಕರಣಗಳುಳ್ಳ ಕಣ್ವ ಡಯಾಸ್ಪೋಸ್ಟಿಕ್ ಕೇಂದ್ರ’ ಸ್ಥಾಪನೆ. ಕಡಿಮೆ ದರದಲ್ಲಿ ವೈದ್ಯಕೀಯ ತಪಾಸಣೆ-ಪರಿಣಿತರಿಂದ ಮಾಹಿತಿ-ಮಾರ್ಗದರ್ಶನ ನೀಡುವ ಕಾಯಕದಲ್ಲಿ ಇದೀಗ ನಿರತರು.