Categories
ಕೃಷಿ ರಾಜ್ಯೋತ್ಸವ 2014 ರಾಜ್ಯೋತ್ಸವ ಪ್ರಶಸ್ತಿ

ಡಿ.ಎ. ಚೌಡಪ್ಪ

ಚೌಡಪ್ಪ ಅವರು ಪಿನಾಕಿನಿ ನದಿಯಲ್ಲಿ ಮರಳು ಅಕ್ರಮ ದಂಧೆಯನ್ನು ವಿರೋಧಿಸುವ ಹೋರಾಟದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಸರ್ಕಾರಕ್ಕೆ ಆಗುತ್ತಿರುವ ನಷ್ಟದ ಬಗ್ಗೆ ಅಪಾರ ಮಾಹಿತಿಯನ್ನು ನೀಡಿ ಮೆಚ್ಚುಗೆಯನ್ನು ಪಡೆದಿರುವ ಚೌಡಪ್ಪ ಅನೇಕ ಬಾರಿ ಮಾರಣಾಂತಿಕ ಹಲ್ಲೆಗಳಿಂದ ಪಾರಾಗಿದ್ದಾರೆ. ವೃತ್ತಿಯಿಂದ ನೇಕಾರರಾದ ಚೌಡಪ್ಪ ಕೃಷಿಯನ್ನು ತಮ್ಮ ಬದುಕನ್ನಾಗಿ ಮಾಡಿಕೊಂಡು ಮರಳು ನಿಕ್ಷೇಪಗಳನ್ನು ಉಳಿಸುವ ಹೋರಾಟದಲ್ಲಿ ಈಗಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.