Categories
ರಂಗಭೂಮಿ ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ

ತಿಪ್ಪೇಸ್ವಾಮಿ ಆರ್.

ಸಂಗೀತ ಮತ್ತು ನಟನಾ ಕ್ಷೇತ್ರದ ದೈತ್ಯ ದೇಸಿ ಪ್ರತಿಭೆ ವಿದ್ವಾನ್ ತಿಪ್ಪೇಸ್ವಾಮಿ ಆರ್. ಪಾತ್ರಗಳಿಗೆ ಜೀವತುಂಬಿದ ಕಲಾವಿದರು, ಸಾವಿರಾರು ಶಿಷ್ಯರನ್ನು ರೂಪಿಸಿದ ಸಂಗೀತದ ಗುರು.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಉಪ್ಪಳಗೆರೆ ಗ್ರಾಮದ ತಿಪ್ಪೇಸ್ವಾಮಿ ಅವರದ್ದು ಕಲಾಕುಟುಂಬ. ಅಪ್ಪತಾತ ರಂಗಕಲಾವಿದರು, ಅಮ್ಮ ಜನಪದ ಗಾಯಕಿ, ಕಲೆ ರಕ್ತಗತ. ೬ನೇ ವಯಸ್ಸಿಗೇ ರಂಗಪ್ರವೇಶ. ಭಕ್ತಮಾರ್ಕಂಡೇಯ, ಅಣ್ಣತಂಗಿ, ಶ್ರೀಕೃಷ್ಣಗಾರುಡಿ, ಕುರುಕ್ಷೇತ್ರ ಮುಂತಾದ ಪೌರಾಣಿಕ-ಐತಿಹಾಸಿಕ ನಾಟಕಗಳಲ್ಲಿ ನಟನೆ. ದುರ್ಗದ ಸಿಂಹಿಣಿ ಒನಕೆ ಓಬವ್ವ ನಾಟಕದ ಅಸಂಖ್ಯ ಪ್ರದರ್ಶನಗಳಲ್ಲಿ ಮಿಂಚಿದ ಕಲಾವಿದ. ರಂಗ ಸಂಗೀತ- ನಿರ್ದೇಶನದಲ್ಲೂ ಎತ್ತಿದ ಕೈ. ಗಡಿಯಾರ ರಿಪೇರಿಯ ವೃತ್ತಿಯ ನಡುವೆ ಶಾಸ್ತ್ರೀಯ ಸಂಗೀತದ ಕಲಿಕೆ, ವಿದ್ವತ್ ಸಂಪಾದನೆ. ಶ್ರೀ ಏಕನಾಥೇಶ್ವರಿ ಸಂಗೀತ ವಿದ್ಯಾಲಯ ಸ್ಥಾಪಿಸಿ ೧೨೦೦ಕ್ಕೂ ಅಧಿಕ ಶಿಷ್ಯರ ರೂಪಿಸಿದ ಗುರು. ೩೨ ವರ್ಷಗಳ ಸಾರ್ಥಕ ಕಲಾಸೇವೆ. ಹತ್ತಾರು ಪ್ರಮುಖ ಸಾಂಸ್ಕೃತಿಕ ಉತ್ಸವಗಳಲ್ಲಿ ಬೆಳಗಿದ ಕಲಾಚೇತನ.